ಹೊಂಬುಜ ಜೈನ ಮಠಕ್ಕೆ ಸಚಿವ ಡಿ. ಸುಧಾಕರ ಭೇಟಿ
ರಿಪ್ಪನ್ಪೇಟೆ: ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠಕ್ಕೆ ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಘಿಕ ಸಚಿವರಾದ ಡಿ. ಸುಧಾಕರರವರು ಭೇಟಿ ನೀಡಿ, ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ದರ್ಶನ ಪಡೆದರು.
ಹೊಂಬುಜ ಜೈನಮಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ಭಕ್ತಿ ಗೌರವ ಸಮರ್ಪಿಸಿದರು. ನಂತರ ಆಶೀರ್ವದಿಸಿದ ಶ್ರೀಗಳವರು ಶ್ರೀಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಾಲೋಚಿಸಿ ನಂತರ ಸಚಿವರನ್ನು ಸನ್ಮಾನಿಸಿ ಆಶೀರ್ವದಿಸಿದರು.