ರಿಪ್ಪನ್ಪೇಟೆ: ಹೊಸನಗರ ತಾಲ್ಲೂಕ್ ಮಹಿಳಾ ಸಿರಿಗನ್ನಡ ವೇದಿಕೆಯವರು ಏಪ್ರಿಲ್ 4 ರಂದು ಅಯೋಜಿಸಲಾಗಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಎಸ್.ಪಿ.ಬಿ.ಯವರ ಗಾನ ಸ್ಪರ್ಧೆಯನ್ನು ಕೊರೊನಾ ಉಲ್ಬಣದಿಂದಾಗಿ ರದ್ದುಗೊಳಿಸಲಾಗಿದೆ ಎಂದು ಮಹಿಳಾ ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷೆ ಎಂ.ಡಿ.ಇಂದ್ರಮ್ಮ ಮತ್ತು ಅಧ್ಯಕ್ಷೆ ಶಶಿಕಲಾ ಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸಿದ್ದ ಸ್ಪರ್ಧಾಳುಗಳಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಮಹಿಳಾ ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಶಶಿಕಲಾ ಮಲ್ಲಪ್ಪ ಮನವಿಯಲ್ಲಿ ತಿಳಿಸಿದ್ದಾರೆ.
Related