ಹೊಸನಗರದಲ್ಲಿ ನಾಡಹಬ್ಬ ದಸರಾ ಅದ್ದೂರಿ ಆಚರಣೆ | ದೇಶದ ಸೈನಿಕರಿಗೆ ಹೋರಾಟದ ಶಕ್ತಿ ನೀಡಲಿ ಎಲ್ಲಾ ಊರಿನಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸಿರಲಿ ; ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ

0 718

ಹೊಸನಗರ: ಗಡಿಯಲ್ಲಿ ಕಾವಲು ಕಾಯುವುದರ ಜೊತೆಗೆ ನಮ್ಮನ್ನು ಸುರಕ್ಷಿತವಾಗಿ ಇರುವಂತೆ ಮಾಡಿರುವ ದೇಶದ ಸೈನಿಕರಿಗೆ ಹೋರಾಟದ ಶಕ್ತಿ ನೀಡಲಿ ದೇಶದಲ್ಲಿ ರಾಜ್ಯದಲ್ಲಿ ಮತ್ತು ಪ್ರತಿಯೊಂದು ಊರು ಗ್ರಾಮಗಳಲ್ಲಿ ಸುಖ-ಶಾಂತಿ ನೆಮ್ಮದಿ ಇರುವಂತೆ ಮಾಡಲಿ ಎಂದು ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ಹೊಸನಗರ ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರವರು ಪ್ರಾರ್ಥಿಸಿದರು.

ಪಟ್ಟಣ ಪಂಚಾಯತಿಯಲ್ಲಿ ಹಾಗೂ ತಾಲ್ಲೂಕು ಕಛೇರಿಯ ಆವರಣದಲ್ಲಿರುವ ಉಪ-ಖಜಾನೆಗೆ ಪೂಜೆ ಸಲ್ಲಿಸಿ ನಂತರ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ವಿಜಯಿಭವ, ದಿಗ್ವಿಜಯಿಭವ, ಸಾಮಾನ್ಯವಾಗಿ ಯೋಧರನ್ನು ಹರಿಸುವ ನುಡಿ ಅದರೆ ಇದನ್ನು ಸಾಮಾನ್ಯವಾಗಿ ಎಲ್ಲರಿಗೂ ಬಳಸುವುದು ವಾಡಿಕೆಯಾಗಿದೆ. ಅಂದರೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಯೋಧರೇ ಎಲ್ಲರೂ ಜಯಕ್ಕಾಗಿ ಹಂಬಲಿಸುವವರೆ ಕೃಷಿಕನೊಬ್ಬ ಉತ್ತಮ ಫಸಲು ಬಂದು ಹೆಚ್ಚು ಲಾಭ ತರಲು ನಿರೀಕ್ಷಿದರೇ ಕಛೇರಿಯಲ್ಲಿ ಕೆಲಸ ಮಾಡುವಾತ ಈ ದಿನದ ಕೆಲಸವೆಲ್ಲ ಸುಲಭವಾಗಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಂತಾಗಲಿ ಎಂದು ನಿರೀಕ್ಷಿಸುತ್ತೇನೆ. ವೈದ್ಯನೊಬ್ಬ ಶಸ್ತ್ರ ಕ್ರಿಯೆಯು ಸಫಲವಾಗಲಿ ಗೆಲುವು ಸಿಗಲೆಂದು ಭಯಸುತ್ತಾರೆ. ಈ ನಿರೀಕ್ಷೆಯ ಹಿನ್ನೆಲೆಯಲ್ಲಿ ಆಯುಧ ಪೂಜೆ ಮಹತ್ವ ಪಡೆದಿದ್ದು ನಾಡ ಹಬ್ಬಗಳ 9 ದಿನಗಳು ವಿಶೇಷತೆಯಿಂದ ಕೂಡಿದ್ದು ಮಹಾನವಮಿಯಂದು ಆಯುಧ ಪೂಜೆ ಎಂದು ಆಚರಿಸುವ ಸಂಪ್ರದಾಯ ಪೂರ್ವದಿಂದಲೂ ಬಂದಿದೆ. ಈ 9ದಿನಗಳಲ್ಲಿ 8ನೇ ದಿನ ಆಯುಧಗಳನ್ನು ಶುದ್ದಗೊಳಿಸಿ ಪೂಜಿಸುವ ಹಬ್ಬವೇ ಆಯುಧಪೂಜೆ. ಮರುದಿನ 9ನೇ ದಿನವನ್ನು ವಿಜಯ ಸಾಧಿಸುವ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ನಮ್ಮ ವಾಡಿಕೆಯಾಗಿದೆ  ಎಂದರು.

ವಿಜಯದಶಮಿಯಂದು ಆಚರಿಸುವ ಈ ದಿನದಂದು ಮಹತ್ವ ಪಡೆದಿದೆ‌‌. ಪ್ರಮುಖ ಬೀದಿಗಳಲ್ಲಿ ಚಾಮುಂಡೇಶ್ವರಿ ತಾಯಿಯ ಮೆರವಣಿಗೆ ನಡೆಸಿ ಬನ್ನಿಮಂಟಪಕ್ಕೆ ಹೋಗಿ ಬನ್ನಿ ಕಡಿಯುವ ಈ ಕಾರ್ಯಕ್ರಮ ನಡೆಸಿ ನಂತರ ಮಾತನಾಡಿ, ಪ್ರತಿ ವರ್ಷ ಬನ್ನಿ ಕಡಿಯುವ ಕಾರ್ಯಕ್ರಮ ನಡೆಸುತ್ತಿದ್ದು ಈ ಬನ್ನಿಯನ್ನು ಪಡೆದು ದೊಡ್ಡವರು ಸಣ್ಣವರು ಎಂಬ ಭೇದವಿಲ್ಲದೇ ಎಲ್ಲರ ಆಶೀರ್ವಾದ ಪಡೆಯುವ ಈ ಪದ್ದತಿಯಾಗಿದ್ದು ನಮ್ಮ-ನಮ್ಮಲಿರುವ ಭೇದ-ಭಾವ, ದ್ವೇಷ, ಅಸೂಯೆ ಮರೆತು ಎಲ್ಲರೂ ಒಟ್ಟಾಗುವ ಉದ್ದೇಶ ಕಾರ್ಯಕ್ರಮವಾಗಿದ್ದು ಎಲ್ಲರೂ ಒಟ್ಟಾಗಿ ಒಂದಾಗಿ ಬಾಳುವುದರ ಮೂಲಕ ನಾಡಿನಲ್ಲಿ ಶಾಂತಿ ಸಮೃದ್ಧಿ ನೆಲೆಯಾಗಲಿ ಎಂದರು.

ದಸರಾ ಸಮಿತಿಯ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಹಾಲಗದ್ದೆ ಉಮೇಶ್‌ರವರು ಮಾತನಾಡಿ, ದಸರಾ ಆಚರಣೆಯನ್ನು ಹೊಸನಗರದಲ್ಲಿ ಅದ್ದೂರಿಯಾಗಿ ನಡೆಸುವ ಉದ್ದೇಶ ಹೊಂದಿದ್ದು ಅದು ಈಗ ನೆರವೇರಿದೆ. ಜಮಾ ಖರ್ಚುಗಳ ಬಗ್ಗೆ ಲೆಕ್ಕಿಸದೇ ಹೊಸನಗರದ ಗಂಗಾಧರೇಶ್ವರ ದೇವಸ್ಥಾನದಿಂದ ಬನ್ನಿ ಮಂಟಪದವರೆಗೆ ಮೈಸೂರಿನಲ್ಲಿ ನಡೆಸಲಾದ ದಸರಾ ಕಾರ್ಯದಂತೆ ಹೊಸನಗರದಲ್ಲಿ ನಡೆಸಲು ಪ್ರಯತ್ನಿಸಿದ್ದು  ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.

ಹೊಸನಗರ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದು, ಹೊಸನಗರದ ಪ್ರಮುಖ ಬೀದಿಗಳಲ್ಲಿ ಹಲವಾರು ಸಾಂಸ್ಕೃತಿಕ ಕಲಾ ತಂಡದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮನರಂಜಿಸಿದ್ದು ಸಂಜೆ 5 ಗಂಟೆಗೆ ದ್ಯಾವರ್ಸ ಈಶ್ವರ ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿರುವ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಕಾರ್ಯಕ್ರಮವನ್ನು ತಹಶೀಲ್ದಾರ್ ರಾಕೇಶ್‌ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ನಾಡಹಬ್ಬಗಳ ಸಮಿತಿಯ ಸದಸ್ಯರಾದ ಎನ್. ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ಎನ್.ಆರ್. ದೇವಾನಂದ್, ಗುರುರಾಜ್ ಆರ್, ಚಿರಾಗ್, ರೇಣುಕಯ್ಯ, ಕೌಶಿಕ್, ಲೋಹಿತ್, ಗಣೇಶ್ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ಕಾರ್ಯದರ್ಶಿ ಹರೀಶ್, ಮಲ್ಲಿಕಾ,  ನವೀನ್,  ರಾಧಿಕ, ನಾಗಪ್ಪ, ಮಂಜುನಾಥ್, ಕಟ್ಟೆ ಸುರೇಶ್ ಮನೋಹರ್, ಗೋಪಾಲ್, ಹರೀಶ್, ಪ್ರಶಾಂತ್, ಸುಧೀಂದ್ರ ಪಂಡಿತ್, ಬಸವರಾಜ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಾರುತಿ, ಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರು  ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!