ಮೂಡಿಗೆರೆ: ತಾಲೂಕಿನ ಕಳಸ ಪಟ್ಟಣದ ಕರ್ನಾಟಕ ಬ್ಯಾಂಕ್ ನಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ.
ಪ್ಯಾನ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಈ ಬೆಂಕಿ ಹರಡಿದೆ ಎನ್ನಲಾಗಿದ್ದು . ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಬ್ಯಾಂಕಿನ ಬಾಗಿಲನ್ನು ತೆಗೆಸಿದ್ದಾರೆ.
ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಗಿದ್ದು ನಷ್ಟದ ಪ್ರಮಾಣ ತಿಳಿದುಬಂದಿಲ್ಲ.
Related