ಶಿವಮೊಗ್ಗ: ಬೈಕ್ ಕಳ್ಳತನ ಪ್ರಕರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.09 ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ನಗರದ ಎನ್.ಟಿ ರಸ್ತೆಯಲ್ಲಿ ನಿಲ್ಲಿಸಿದ್ದ, ಬೈಕ್ ಗಳನ್ನು ಯಾರೋ ಆರೋಪಿಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ಸಂಬಂಧ ಪ್ರಕರಣದ ಆರೋಪಿಯಾದ ಶಿವಮೊಗ್ಗ ಟೌನ್ ವಾಸಿಯಾದ ಮಂಜುನಾಥ ಅಲಿಯಾಸ್ ಮಂಜ, (30) ಈತನನ್ನು ಮಾ. 10 ರಂದು ವಶಕ್ಕೆ ಪಡೆದು, ಆರೋಪಿಯಿಂದ ಈ ಪ್ರಕರಣದಲ್ಲಿ ಕಳವು ಮಾಡಿದ 01 ಬೈಕ್ ಹಾಗೂ ಇತರೆ 02 ಬೈಕ್ ಸೇರಿದಂತೆ ಸೇರಿದಂತೆ, ಒಟ್ಟು 03 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇವುಗಳ ಅಂದಾಜು ಮೌಲ್ಯ 1 ಲಕ್ಷ ರೂ. ಆಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ ಎಂದು ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಎಂ ಶಾಂತರಾಜು ರವರು ತಿಳಿಸಿರುತ್ತಾರೆ.
ಈ ಪ್ರಕರಣದ ಆರೋಪಿಯ ಪತ್ತೆಗಾಗಿ ಪ್ರಶಾಂತ್ ಮುನ್ನೋಳಿ, Dysp ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ವಸಂತ್ ಕುಮಾರ್, P.I ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ಮಂಜಮ್ಮ PSI, ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದ ಹಾಗೂ ಸಿಬ್ಬಂದಿಗಳಾದ H.C ಲಚ್ಚಾನಾಯ್ಕ್, ಶೇಖರ್, C.P.C ನಿತಿನ್ ಹಾಗೂ ಸುದರ್ಶನ್ ರವರುಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿತ್ತು.