ತಾಯಿ-ಮಗುವಿನ ಸಂಬಂಧ ಅನನ್ಯವಾದದ್ದು ; ಡಾ|| ಮಾರ್ಷಲ್ ಶರಾಂ

0 287

ಹೊಸನಗರ: ತಾಯಿ-ಮಗುವಿನ ಸಂಬಂಧ ಕರುಳು ಬಳ್ಳಿಯ ಸಂಬಂಧ ಹಾಗಾಗಿ ತಾಯಿ-ಮಗುವಿನ ಸಂಬಂಧ ಅನನ್ಯವಾದದ್ದು ಎಂದು ಕೊಡಚಾದ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮಾರ್ಷಲ್ ಶರಾಂ ಹೇಳಿದರು.

ಪಟ್ಟಣದ ಕೊಡಚಾದ್ರಿ ಕಾಲೇಜಿವ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ದಿ.ಸುಬ್ಬಲಕ್ಷ್ಮಿ ಕೆ ಸೀನಪ್ಪ ಇವರ ದತ್ತಿನಿಧಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ತಾಯಿ ಮತ್ತು ಮಗು ಎಂಬ ವಿಷಯ ಕುರಿತು ಮಾತನಾಡಿದರು.

ಮಗು ಗರ್ಭಾವಸ್ಥೆಯಿಂದ ಹಿಡಿದು ಮಗ/ಮಗಳು ಬದುಕಿರುವವರೆಗೂ ತಾಯಿಯ ವಾತ್ಸಲ್ಯದ ಗುಣಗಳನ್ನು ಕಾಣಬಹುದಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ.ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಗೂ ನಮ್ಮ ಕರ್ನಾಟಕ ರಾಜ್ಯಕ್ಕೂ ತಾಯಿ-ಮಗುವಿನ ಸಂಬಂಧದಂತೆ ಬೆಳೆದಿದ್ದು ಕನ್ನಡಿಗರು ರಾಜ್ಯ-ದೇಶದಿಂದ ಹೊರಗೆ ಹೋದರು ಅಲ್ಲಿಯು ಕನ್ನಡದ ಕಂಪು ಪಸರಿಸುತ್ತಾರೆ ಇದೇ ತಾಯಿ-ಮಕ್ಕಳ ಸಂಬಂಧ ಎನ್ನುವುದು ಎಂದರು.

ಹೊಸನಗರ ತಾಲ್ಲೂಕಿನ ಹಿರಿಯ ಸಾಹಿತಿ ನಾಗರಕೊಡಿಗೆ ಗಣೇಶ್ ಮೂರ್ತಿಯವರು ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕೊಡಚಾದ್ರಿ ಕಾಲೇಜಿನ ಉಪನ್ಯಾಸಕರಾದ ಡಾ.ಶ್ರೀಪತಿ ಹಳಗುಂದ, ದತ್ತಿನಿಧಿಗಳಾದ ಕೆ.ಎಸ್. ವಿನಾಯಕರವರು ಆಗಮಿಸಿ ತಾಯಿ ಮತ್ತು ಮಕ್ಕಳ ಸಂಬಂಧದ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ|| ಉಮೇಶ್‌ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕಸಾಪ ಗೌರವ ಕಾರ್ಯದರ್ಶಿ ಎಂ.ಕೆ.ವೆಂಕಟೇಶ್‌ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕುಬೇಂದ್ರಪ್ಪ, ಹೆಚ್.ಆರ್ ಪ್ರಕಾಶ್, ಹಿರಿಯ ಸದಸ್ಯರಾದ ಕೆ.ಸುರೇಶ್‌ಕುಮಾರ್, ಕೆ.ಜಿ.ನಾಗೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಾಯಿ-ಮಗುವಿನ ಸಂಬಂಧದ ಬಗ್ಗೆ ಹಾಡಿದರು. ಈ ಹಾಡಿಗೆ ತಕ್ಕಂತೆ ಸ್ಥಳೀಯ ಕಲಾವಿದರಾದ ವಿದ್ಯಾ ನಾಗೇಂದ್ರ ತಾಯಿ ಮಗುವಿನ ಸಂಬಂಧದ ಕುರಿತು ಕುಂಚದಿಂದ ಚಿತ್ರ ಬಿಡಿಸಿದರು.

ಕಾರ್ಯಕ್ರಮದಲ್ಲಿ ಕುಮಾರಿ ವಿಭ ಪ್ರಾರ್ಥಿಸಿದರು. ಕಸಾಪ ಸದಸ್ಯ ಹೆಚ್.ಆರ್. ಪ್ರಕಾಶ್ ಸ್ವಾಗತಿಸಿದರು.

Leave A Reply

Your email address will not be published.

error: Content is protected !!