ಮೂಡಿಗೆರೆ: ಬಾವಿ ಕೆಲಸ ಮಾಡುವಾಗ ಮಣ್ಣು ಕುಸಿದು ಕಾರ್ಮಿಕ ಸಾವಿಗೀಡಾಗಿರುವ ದಾರುಣ ಘಟನೆ ಕಳಸದ ಯಡೂರು ಗ್ರಾಮದಲ್ಲಿ ನಡೆದಿದೆ.

ಮನೋಜ್ (45) ಮೃತ ಕಾರ್ಮಿಕ. ಸೋಮವಾರ ಕಳಸ ಸುತ್ತಮುತ್ತ ಮಳೆಯಾಗಿತ್ತು. ಇದರಿಂದ ಮಣ್ಣು ಸಡಿಲಗೊಂಡಿದೆ. ಮಂಗಳವಾರ ಕಾರ್ಮಿಕ ಕೆಲಸ ಮಾಡುವಾಗ ಮಣ್ಣು ಕುಸಿತದಿಂದ ಸಾವಿಗೀಡಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕಳಸ ಸುತ್ತಮುತ್ತ ಬಾವಿ ಕೆಲಸ ಮಾಡಿಕೊಂಡಿದ್ದ ಕೇರಳ ಮೂಲದ ಬಾವಿ ರಿಂಗ್ ಮಾಡುವ ಕಾರ್ಮಿಕರ ತಂಡದ ಸದಸ್ಯನಾಗಿದ್ದ ಮನೋಜ್ ಇತ್ತೀಚಿಗೆ ಯಡೂರು ಗ್ರಾಮದ ಕೆರೆದಿಡಿಗೆ ಎಂಬಲ್ಲಿ ಹಿರೇಬೈಲು ಗ್ರಾಪಂ ನಿಂದ ನಿರ್ಮಿಸಲಾಗುತ್ತಿದ್ದ ಬಾವಿಗೆ ರಿಂಗ್ ಅಳವಡಿಸುವ ಕೆಲಸ ಮಾಡುತ್ತಿದ್ದರು.
