ಬಿರುಗಾಳಿ ಸಹಿತ ಮಳೆಗೆ ಮನೆ, ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ

0 575

ಹೊಸನಗರ: ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಂಚ ರೋಡ್‌ನಲ್ಲಿ ಮಂಜುನಾಥ್‌ರವರ ಮನೆ ಹಾಗೂ ಕೊಟ್ಟಿಗೆ ಮೇಲೆ ಮರ ಮುರಿದ್ದು ಬಿದ್ದ ಘಟನೆ ವರದಿಯಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.

ಎರಡು ವರ್ಷಗಳ ಹಿಂದೆಯೇ ಮಳೆಗಾಲದಲ್ಲಿ ದೊಡ್ಡ ಗಾತ್ರದ ಮರಗಳು ಬೀಳುವ ಸಂಭವವಿದೆ ಎಂದು ಅರಣ್ಯ ಇಲಾಖೆಯವರಿಗೆ ಪದೇ-ಪದೇ ಲಿಖಿತ ದೂರು ನೀಡಿದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಮನೆಯ ಸ್ವಲ್ಪ ಭಾಗ ಹಾಗೂ ಕೊಟ್ಟಿಗೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ.

ಇನ್ನೂ ಕೆಲವು ಮರಗಳಿದ್ದು ಅವುಗಳು ಈ ವರ್ಷದ ಮಳೆ-ಗಾಳಿಗೆ ಬೀಳುವ ಸಂಭವವಿದ್ದು ಅದು ಸಹ ನಮ್ಮ ಮನೆಗೆ ಹಾನಿ ಮಾಡುವ ಸಂಭವವಿದ್ದು ತಕ್ಷಣ ಅರಣ್ಯ ಇಲಾಖೆ ಗಮನ ಹರಿಸಿ ಆ ಮರಗಳ ಕೊಂಬೆಗಳನ್ನು ಅಥವಾ ಮರಗಳನ್ನು ಕಡಿಸಲಿ ಎಂದು ಅರಣ್ಯ ಇಲಾಖೆಯವರಲ್ಲಿ ಮಂಜುನಾಥ್ ಮನವಿ ಮಾಡಿದ್ದು ಹಾನಿಯಾಗಿರುವ ಮನೆ-ಕೊಟ್ಟಿಗೆಗೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಈ ಮೂಲಕ ಮನವಿ ಮಾಡಿದರು.

Leave A Reply

Your email address will not be published.

error: Content is protected !!