ಶಿವಮೊಗ್ಗದಲ್ಲಿ ಮಳೆ ತಂದ ಅವಾಂತರ ; ಅಪಾರ ಹಾನಿ

0 36

ಶಿವಮೊಗ್ಗ : ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದು ಪರಿಣಾಮ ಮರಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ.

ಬಿರುಗಾಳಿ ಮಳೆಯ ಅವಾಂತರಕ್ಕೆ ಮರ ಬಿದ್ದ ಪರಿಣಾಮ ಕಾರೊಂದು ಜಖಂಗೊಂಡಿದೆ. ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದ ಹಿಂಭಾಗ ರಾಯಲ್ ಮೆಡಿಕಲ್ ಅವರ ಮನೆ ಬಳಿಯಿದ್ದ ತೆಂಗಿನ ಮರವೊಂದು ಧರಾಶಾಹಿಯಾಗಿದೆ.

ಇನ್ನೂ ಮ್ಯಾಕ್ಸ್ ಆಸ್ಪತ್ರೆ ಪಕ್ಕದಲ್ಲಿ ಮರಗಳು ಉರುಳಿ ಬಿದ್ದ ಪರಿಣಾಮ ಎರಡು ಕಾರುಗಳು ಜಖಂಗೊಂಡಿವೆ. ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ಮಳೆ ಗಾಳಿಗೆ ಮನೆಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

Leave A Reply

Your email address will not be published.

error: Content is protected !!