Shivamogga | ಲೋಕ ಬಲೆಗೆ ಬಿದ್ದ ಜನನ ಮರಣ ವಿಭಾಗದ ಎಫ್ಡಿಎ
ಶಿವಮೊಗ್ಗ : ಜನನ ಪ್ರಮಾಣ ಪತ್ರದಲ್ಲಿ ತಿದ್ದುಪಡಿಗೆ 1000 ರೂ. ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆಯ ಎಫ್ಡಿಎ ನಾಗರಾಜ್ ಮತ್ತು ಜನನ ಮರಣದ ನೊಂದಣಾಧಿಕಾರಿ ಸುಪ್ರಿಯ ಅವರ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿ ಇಂದು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಗಿರೀಶ್ ಜೆ. ಎನ್ನುವವರು 2 ದಿನಗಳ ಹಿಂದೆ ಜನನ ಪ್ರಮಾಣ ಪತ್ರದ ತಿದ್ದುಪಡಿಗೆ ಅರ್ಜಿ ಸಲ್ಲಿಸುವಾಗ ವಿಭಾಗದ ಎಫ್ಡಿಎ ನಾಗರಾಜ್ ಅವರು 2 ಪ್ರತಿ ನೀಡಲು 1000 ನೀಡುವಂತೆ ಸೂಚಿಸಿದ್ದು, ಅವರಿಗೆ 1000 ರೂ. ನೀಡುವುದನ್ನು ಮತ್ತು ಅವರು ಆಡಿದ ಮಾತುಗಳನ್ನು ದೂರುದಾರ ಗಿರೀಶ್ ಅವರು ಮೊಬೈಲ್ನಲ್ಲಿ ದಾಖಲಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೆಲ್ಲನ್ನಲಾಗಿದೆ. ಅದರ ಆಧಾರದ ಮೇಲೆ ಇಂದು ಲೋಕಾಯುಕ್ತ ಪೊಲೀಸರು ಡಿ.ವೈ.ಎಸ್.ಪಿ. ಉಮೇಶ್ ಈಶ್ವರ್ನಾಯಕ್ ನೇತೃತ್ವದಲ್ಲಿ ಪಾಲಿಕೆಯ ಜನನ ಮರಣ ವಿಭಾಗಕ್ಕೆ ಭೇಟಿ ನೀಡಿ ನಾಗರಾಜ್ ಮತ್ತು ಸುಪ್ರಿಯ ಅವರನ್ನು ವಿಚಾರಣೆಗೆ ಒಳಪಡಿಸಿದರು. ದಾಖಲೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.