ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಗುದ್ದಿದ ಟಿಪ್ಪರ್ ಲಾರಿ !
ರಿಪ್ಪನ್ಪೇಟೆ : ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಗುದ್ದಿದ ಬೈಕ್ ಸವಾರ ಸಣ್ಣ-ಪುಟ್ಟ ಗಾಯಗಳಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಕೋಡೂರು ಗ್ರಾಮದ ಕೀಳಂಬಿ ರಸ್ತೆ ಸಮೀಪ ಇದೀಗ ನಡೆದಿದೆ.
ರಿಪ್ಪನ್ಪೇಟೆ ಕಡೆಯಿಂದ ಹೊಸನಗರ ಕಡೆ ಚಲಿಸುತ್ತಿದ್ದ ಮರಳು ಸಾಗಾಣಿಕೆ ಟಿಪ್ಪರ್ ಲಾರಿ ಬೈಕಿಗೆ ಗುದ್ದಿದ ಪರಿಣಾಮ ಕೋಡೂರು ಮೂಲದ ಸವಾರ ಗಾಯಗೊಂಡು ಬೈಕ್ ಜಖಂಗೊಂಡಿದೆ. ಲಾರಿಯ ಅತೀ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ತಾಲೂಕಿನಾದ್ಯಂತ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಮರಳು ತುಂಬಿದ ಲಾರಿಗಳು ಅತಿ ವೇಗವಾಗಿ ಚಲಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕುವವರು ಯಾರು ಇಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.