ಕ್ರೀಡಾಪಟು ಅಭಿಷೇಕ ಜಾಧವ್ ಸಹಾಯಾರ್ಥ ‘ನಿರಾಕರಣೆ’ ಏಕವ್ಯಕ್ತಿ ನಾಟಕ ಇಂದು
ತೀರ್ಥಹಳ್ಳಿ: ಅಪಘಾತದಲ್ಲಿ (Accident) ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿರುವ ಕ್ರೀಡಾಪಟು (Athlete) ಅಭಿಷೇಕ ಜಾಧವ್ ಸಹಾಯಾರ್ಥ ಏಕವ್ಯಕ್ತಿ ನಾಟಕ (Drama) ‘ನಿರಾಕರಣೆ’ ಪ್ರದರ್ಶನ ತೀರ್ಥಹಳ್ಳಿಯ (Thirthahalli) ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿಂದು ಆಯೋಜಿಸಲಾಗಿದೆ.
ವೀಣಾ ಶಾಂತೇಶ್ವರ ರಚಿಸಿದ ‘ನಿರಾಕರಣೆ’ ನಾಟಕವನ್ನು ಶಿವಮೊಗ್ಗ ಹೊಂಗಿರಣ ಕಲಾತಂಡ ಪ್ರಸ್ತುತಪಡಿಸಲಿದೆ. ರಂಗಕರ್ಮಿ ಸತೀಶ್ ಸಾಸ್ವೇಹಳ್ಳಿ ನಿರ್ದೇಶಿಸಿದ್ದಾರೆ. ಶೃತಿ ಆದರ್ಶ ಅಭಿನಯದಲ್ಲಿ ಏಕವ್ಯಕ್ತಿ ರಂಗ ಪ್ರಯೋಗ ಮೂಡಿ ಬರಲಿದೆ.
ನಾಟಕ ವೀಕ್ಷಣೆಯ ಜೊತೆಗೆ ಅಭಿಷೇಕ್ ಪರವಾಗಿ ನಾವೆಲ್ಲರೂ ಕೈಜೋಡಿಸೋಣ ಎಂದು ಆಯೋಜಕರು ಕೇಳಿಕೊಂಡಿದ್ದಾರೆ.