ಕುಡಿಯುವ ನೀರು ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ; ಬೇಳೂರು ಗೋಪಾಲಕೃಷ್ಣ

0 58

ಹೊಸನಗರ: ಪ್ರಸಕ್ತ ಸಾಲಿನಲ್ಲಿ ಅಲ್ಲದೇ ಮುಂದಿನೆಲ್ಲಾ ದಿನಗಳಲ್ಲಿ ಕುಡಿಯುವ ನೀರು ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದಕ್ಕೆ ಸೂಚನೆ ನೀಡಿದ ಸಾಗರ ಹೊಸನಗರ ಕ್ಷೇತ್ರದ ನೂತನ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.


ಶುಕ್ರವಾರವಾದ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಸಿ, ಆರಂಭಿಕವಾಗಿ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸಭೆ ಆರಂಭಿಸಿ ಮಾತನಾಡಿದ ಅವರು, ಎರಡು ತಿಂಗಳ ಬೇಸಿಗೆ ರಜೆಯ ನಂತರ ಶಾಲಾ ಕಾಲೇಜುಗಳ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳ ಆಗಮನಕ್ಕೆ ಶಾಲಾ ಕಾಲೇಜುಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ, ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಿಹಿ ತಿನಿಸುಗಳನ್ನು ನೀಡುವುದರ ಮೂಲಕ ಹಬ್ಬದ ವಾತಾವರಣ ನಿರ್ಮಿಸಲು ಸೂಚನೆ ನೀಡಿದರು.


ಪ್ರಸಕ್ತ ಸಾಲಿನಲ್ಲಿ ವಿಧ್ಯಾರ್ಥಿಗಳಿಗೆ ಶಿಕ್ಷಕರ ಕೊರತೆ ಇದ್ದರೆ, ಸ್ಥಳೀಯ ವಿದ್ಯಾವಂತ ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನ ಮಾಡಲು ಆಸಕ್ತಿ ಹೊಂದಿರುವ ಶಿಕ್ಷಕ ಅಥವಾ ಶಿಕ್ಷಕಿಯರು ಅದರಲ್ಲೂ ತರಬೇತಿ ಹೊಂದಿರುವ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಲ್ಲದೇ ಉತ್ತಮ ಫಲಿತಾಂಶ ತಂದು ಶಾಲೆಗೆ ಹಾಗೂ ತಾಲ್ಲೂಕಿಗೆ ಹೆಸರು ತರುವಂತಾಗಬೇಕು ಎಂದ ಅವರು, ವಿಧ್ಯಾರ್ಥಿ ವಿಧ್ಯಾರ್ಥಿನೀಯರ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡುವುದಲ್ಲದೇ ಹೊರ ತಾಲ್ಲೂಕಿನ ಅಥವಾ ಹೊರ ಜಿಲ್ಲೆಯ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಗಳಲ್ಲಿ ಸೇರಿಸಿಕೊಳ್ಳದೇ ಹೆಚ್ಚಿನ ಆಧ್ಯತೆಯನ್ನು ಹೊಸನಗರ ತಾಲ್ಲೂಕಿನವರಿಗೇ ನೀಡಬೇಕು ಎಂದರು.


ಪಟ್ಟಣದ ಕೆ.ಇ.ಬಿ ಬಳಿ ಇರುವ ಬಿ.ಸಿ.ಎಂ ಇಲಾಖೆಗೆ ಸಂಬಂಧಿಸಿದ ವಿಧ್ಯಾರ್ಥಿನಿ ನಿಲಯದಲ್ಲಿ ಅತಿಥಿ ಮಹೋದ್ಯರು ಆಗಮಿಸಿದಾಗ ಸಿಹಿ ತಿನ್ನಿಸು ಹಾಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಇನ್ನುಳಿದ ಸಮಯದಲ್ಲಿ ಊಟದ ವ್ಯವಸ್ಥೆ ಸರಿಯಿರುವುದಿಲ್ಲ. ಅಲ್ಲದೇ ಈ ಬಗ್ಗೆ ವಾರ್ಡನ್ ಬಳಿ ವಿದ್ಯಾರ್ಥಿಗಳು ಮಾಹಿತಿ ನೀಡಿದರೆ ಅಂತಹ ವಿಧ್ಯಾರ್ಥಿಗಳಿಗೆ ಶಿಕ್ಷೆ ನೀಡಲಾಗುತ್ತಿದೆ ಎಂಬ ದೂರಿನನ್ವಯ ಇಲಾಖೆಯ ಅಧಿಕಾರಿಗಳಿಗೆ ತರಾಟ ತೆಗೆದುಕೊಂಡ ಶಾಸಕರು ಮತ್ತೊಮ್ಮೆ ಗುಣಮಟ್ಟದ ಆಹಾರ ಪದಾರ್ಥ ನೀಡುತ್ತಿಲ್ಲ ಮತ್ತು ದೂರು ನೀಡಿದ ವಿದ್ಯಾರ್ಥಿಗಳಿಗೆ ಬೆದರಿಕೆ ನೀಡಲಾಗುತ್ತಿದೆ ಎಂದು ಈ ರೀತಿ ಏನಾದರೂ ದೂರು ಬಂದರೆ ಅಂತಹಾ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಸಮಾಜ ಕಲ್ಯಾಣ ನಿಲಾಖೆ ಹಾಗೂ ಬಿ.ಸಿ.ಎಂ ಇಲಾಖೆಗೆ ಸಂಬಂದಿಸಿದ ಯಾವ ಯಾವ ಹಾಸ್ಟೆಲ್ ಗಳು ದುರಸ್ಥಿಯಲ್ಲಿದೆ ಅಥವಾ ಮರು ನಿರ್ಮಾಣವಾಗಬೇಕಾಗಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಸಕ್ತ ಸಾಲಿನಲ್ಲಿ ಇರುವ ಅನುದಾನದಲ್ಲಿಯೇ ಸರಿಪಡಿಸಿಕೊಳ್ಳಿರಿ ಮುಂದಿನ ದಿನಗಳಲ್ಲಿ ಯಾವ ಯಾವ ಇಲಾಖೆಗೆ ಯಾವ ಸಚಿವರು ಬರುತ್ತಾರೋ ನೋಡಿ ಅವರ ಬಳಿ ಸಂಬಂಧಿಸಿದಂತೆ ಚರ್ಚಿಸಿ ಅನುದಾನ ತರುವ ವ್ಯವಸ್ಥೆ ಮಾಡುತ್ತೇನೆ ಎಂದರು.


ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯನ್ನು ಕುರಿತು ಚರ್ಚೆ ನಡೆಸಿದ ಶಾಸಕರು ಗ್ರಾಮೀಣ ಕುಡಿಯುವ ನೀರಾವರಿ ಇಲಾಖೆಯ ಬಗ್ಗೆ ಚರ್ಚಿಸಿ ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಸಹಾಯ ಅಭಿಯಂತರರನ್ನು ಪ್ರಶ್ನಿಸಿದಾಗ ಸಂಬಂದಿಸಿದ ಸಹಾಯಕ ಇಂಜಿನಿಯರ್ ರವರು ಮಾತನಾಡಿ ಎಲ್ಲಾ ಗ್ರಾಮಗಳಲ್ಲೂ ನೀರಿನ ವ್ಯವಸ್ಥೆ ಮಾಡಲಾಗಿದ್ದು, ನೀರಿನ ಸಮಸ್ಯೆ ಇಲ್ಲವೆಂದು ಹೇಳುತಿದ್ದಂತೆಯೇ ಎಂ.ಗುಡ್ಡೇಕೊಪ್ಪ, ಗಂಗನಕೊಪ್ಪ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಯ ಕೆಲ ಪಿ.ಡಿ.ಓ ಗಳು ನೀರಿನ ಸಮಸ್ಯೆ ಬಗ್ಗೆ ತಿಳಿಸಿದರು. ಇದನ್ನು ಗಮನಿಸಿದ ಶಾಸಕರು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಇಂಜಿನಿಯರ್ ಗಳಿಗೆ ತರಾಟೆಗೆ ತೆದುಕೊಂಡು ಕೂಡಲೇ ನಿಮ್ಮ ಇಲಾಖೆಯಲ್ಲಿ ಇರುವಂತಹಾ ಹಣದಿಂದ ನೀರಿನ ಸಮಸ್ಯೆ ಇರುವ ಜಾಗದಲ್ಲಿ ಕೊಳವೆ ಬಾವಿ ತೆಗೆಸುವುದರ ಮೂಲಕ ಜನತೆಗೆ ನೀರು ಒದಗಿಸಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು.


ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಿ.ಜಿ.ನಾಗರಾಜ, ಸಣ್ಣಕ್ಕಿ ಮಂಜು, ನಾಸೀರ್, ಸದಾಶಿವ ಶ್ರೇಷ್ಠಿ, ಕಲಗೋಡು ರತ್ನಾಕರ್, ಎರಗಿ ಉಮೇಶ್, ಗುರು ಜಯನಗರ ಸೇರಿದಂತೆ ವಿವಿಧ ಇಲಾಖೆಯ ಆಡಳಿತ ಅಧಿಕಾರಿಗಳು, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರಲ್ಲದೇ ವಿವಿಧ ಇಲಾಖೆಯ ಅಧಿಕಾರಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಶಾಸಕರನ್ನು ಗೌರವಿಸಿ ಸನ್ಮಾನಿಸಿದರು.

Leave A Reply

Your email address will not be published.

error: Content is protected !!