ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ
ತೀರ್ಥಹಳ್ಳಿ : ಸರ್ಕಾರಿ ಬಸ್ ಹಾಗೂ ಹತ್ತು ಚಕ್ರದ ಲಾರಿಯ ನಡುವೆ ಇಂದು ಬೆಳ್ಳಂಬೆಳಗ್ಗೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಆರಗ ಗೇಟ್ ನಲ್ಲಿ ನಡೆದಿದೆ.
ಬೆಂಗಳೂರಿನಿಂದ ತೀರ್ಥಹಳ್ಳಿ ಮಾರ್ಗವಾಗಿ ಹುಂಚಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿ ನಡುವೆ ಅಪಘಾತವಾಗಿದ್ದು ಬಸ್ನ ಬಲ ಬದಿ ನುಜ್ಜುಗುಜ್ಜಾಗಿದೆ.
ಮಂಜಿನ ವಾತಾವರಣ ಇದ್ದ ಕಾರಣಕ್ಕೆ ಎದುರಿಂದ ಬಂದ ವಾಹನ ಕಾಣಿಸದೆ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.