30 ವರ್ಷಗಳಿಂದ ಬಸ್ ಕಂಡಕ್ಟರ್‌ರಾಗಿ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್‌ರವರಿಗೆ ಸನ್ಮಾನ

0 976

ಹೊಸನಗರ: ಸುಮಾರು 30 ವರ್ಷಗಳಿಂದ ಹೊನ್ನಾಳಿ-ಹೊಸನಗರ, ಹೊಸನಗರ-ಹೊನ್ನಾಳಿ ಎರಡು ಟ್ರಿಪ್ ಪ್ರತಿದಿನ ಓಡಾಟ ನಡೆಸುತ್ತಿರುವ ಗಜಾನನ ಬಸ್ (ಹೊನ್ನಾಳಿ ಬಸ್) ಕಂಡಕ್ಟರ್‌ರಾಗಿ ಸೇವೆ ಸಲ್ಲಿಸಿ ಜನರಿಗೆ ಅವರು ಸೇವೆ ಹಾಗೂ ಮೂವತ್ತು ವರ್ಷಗಳಿಂದ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸಿರುವುದನ್ನು ಮನಗಂಡು ಶಿಕಾರಿಪುರದ ಬಾಪೂಜಿ ಎಜುಕೇಷನ್ ಸೊಸೈಟಿ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿದರು.

ವೆಂಕಟೇಶ್‌ರವರ ತಂದೆ ರಾಮಣ್ಣ ಅದೇ ಹೊನ್ನಾಳಿ ಹೊಸನಗರ ಬಸ್ ಡ್ರೈವರ್‌ರಾಗಿ ಸೇವೆ ಸಲ್ಲಿಸಿದ್ದವರು ಅವರ ನಂತರ ಅವರ ಮಗ ವೆಂಕಟೇಶ್‌ರವರು ಕಂಡಕ್ಟರ್‌ರಾಗಿ ಸೇವೆ ಸಲ್ಲಿಸಿ ಸುಮಾರು ಮೂವತ್ತು ವರ್ಷ ಕಳೆದಿದೆ. ಇವರು ಪ್ರತಿದಿನ ಶಿಕಾರಿಪುರ ಹೊನ್ನಾಳಿಯಿಂದ ಹೊಸನಗರ ಜನತೆಗೆ ಬಾಳೆಹಣ್ಣು ಮೆಣಸಿಕಾಯಿ ಅಕ್ಕಿ ಬೇಳೆ ಇತ್ಯಾದಿ ಹೊಸನಗರದಿಂದ ಹಾಲು ಪೇಪರ್ ಇತ್ಯಾದಿಗಳನ್ನು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಯಾವುದೇ ಹಣದ ಆಮಿಷಕ್ಕೆ ಒಳಪಡದೇ ಜನಗಳ ಸೇವೆ ಮಾಡುತ್ತಿರುವುದು ಇಂದಿಗೂ ಕಣ್ಣಿಗೆ ಕಾಣುತ್ತಿದೆ.

ಹಣ ನೀಡಿ ಸನ್ಮಾನ ಮಾಡಿಸಿಕೊಳ್ಳುವುದು ಒತ್ತಡದ ಮೂಲಕ ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿದ್ದು ನಿಜವಾಗಿಯೂ ಜನರ ಹಾಗೂ ಪ್ರಯಾಣಿಕರ ಸೇವೆ ಮಾಡಿ ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ಸಂತೋಷದಾಯಕ ವಿಷಯವಾಗಿದೆ ಇವರು ಇನ್ನೂ ಹೆಚ್ಚು-ಹೆಚ್ಚು ಸಾರ್ವಜನಿಕರ ಸೇವೆ ಹಾಗೂ ಪ್ರಯಾಣಿಕರ ಸೇವೆ ಮಾಡಲಿ ಎಂದು ಹಾರೈಸೋಣ.

Leave A Reply

Your email address will not be published.

error: Content is protected !!