ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ನುಗ್ಗಿದ ಕಾರು !
ರಿಪ್ಪನ್ಪೇಟೆ : ಚಾಲಕನ (Driver) ನಿಯಂತ್ರಣ ತಪ್ಪಿ ಕಾರೊಂದು (Car) ಕೆರೆಗೆ (Lake) ನುಗ್ಗಿದ ಘಟನೆ ಪಟ್ಟಣದ ಹೊರವಲಯದ ಹೊಸನಗರ (Hosanagara) ರಸ್ತೆಯ ಗವಟೂರು (Gavatooru) ಬಳಿ ನಡೆದಿದೆ.
ಬೆಂಗಳೂರಿನಿಂದ (Bangalore) ರಿಪ್ಪನ್ಪೇಟೆ (Ripponpet) ಮಾರ್ಗವಾಗಿ ಹೊಸನಗರದ ಸೊನಲೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ತಾವರೆಕೆರೆಗೆ ನುಗ್ಗಿದೆ.
ಕಾರಿನಲ್ಲಿ ಸೊನಲೆ ಮೂಲದ ಸುರೇಶ್ ಹಾಗೂ ಅವರ ಪತ್ನಿ ಮತ್ತು ಮಗಳು ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಕೂಡಲೇ ಅಪಘಾತಗೊಂಡವರ ಸಹಾಯಕ್ಕೆ ಧಾವಿಸಿದ ಹಿನ್ನಲೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದೆ ಎನ್ನಲಾಗಿದೆ. ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.