ಜಿಂಕೆ ಶಿಕಾರಿ ಮಾಡಿದ್ದ ಮೂವರು ಆರೋಪಿಗಳ ಬಂಧನ !

0 929

ಶಿವಮೊಗ್ಗ : ಜಿಂಕೆ ಶಿಕಾರಿ ಮಾಡಿದ್ದ ಮೂವರು ಆರೋಪಿಗಳು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಉಂಬಳೇಬೈಲು ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಜಿಂಕೆ ಶಿಕಾರಿ ಮಾಡಿದ ಕಾರಣ 03 ಜನ ಆರೋಪಿಗಳ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಉಂಬಳೇಬೈಲು ಗ್ರಾಮದ ಹನುಮಂತಪ್ಪ ಬಿನ್ ತಿಮ್ಮಪ್ಪ, ಅಂಜನಪ್ಪ ಬಿನ್ ತಿಮ್ಮಪ್ಪ ಮತ್ತು ರಾಮ ಬಿನ್ ತಿಮ್ಮಾಭೋವಿ ಎಂಬುವವರು ಬಂಧಿತ ಆರೋಪಿಗಳು.

ಈ ಕಾರ್ಯಾಚರಣೆಯಲ್ಲಿ ಭದ್ರಾವತಿ ಡಿಸಿಎಫ್‌ ಆಶಿಶ್ ರೆಡ್ಡಿ, IFS ಹಾಗೂ ರತ್ನಪ್ರಭ, ACF ರವರ ಮಾರ್ಗದರ್ಶನದಲ್ಲಿ ಉಂಬಳೇಬೈಲು RFO ಎಸ್.ಎಂ ಶಿವರಾತ್ರೆಶ್ವರ ಸ್ವಾಮಿ, ಪವನ್ ಮಹೇಂದ್ರಕರ್ DyRFO, ಗಿಡ್ಡಸ್ವಾಮಿ DyRFO, ಗಸ್ತು ವನಪಾಲಕರಾದ ಸುನಿಲ್ ಸಾಸಲವಾಡ, ಮಾಲತೇಶ ಸೂರ್ಯವಂಶಿ, ಶ್ರೀಕಾಂತ್, ದಿನೇಶ, ಹಾಗೂ ಇತರೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!