ಚಂದ್ರಶೇಖರ ಶೆಟ್ಟಿ ಉಚ್ಚಾಟನೆ ಕ್ರಮಕ್ಕೆ ನಿಟ್ಟೂರು ಕಾಂಗ್ರೆಸ್ ಮುಖಂಡರ ಸ್ವಾಗತ

0 94

ಹೊಸನಗರ: ಇತ್ತೀಚಿಗೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಘಟಕವು ನಿಟ್ಟೂರು ಕಾಂಗ್ರೆಸ್ ಘಟಕದ ಮುಖಂಡ ಚಂದ್ರಶೇಖರ ಶೆಟ್ಟಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷದಿಂದ ಮುಂದಿನ 6 ವರ್ಷಗಳ ಕಾಲ ಅಮಾನತುಗೊಳಿಸಿದ ಕ್ರಮವನ್ನು ನಿಟ್ಟೂರು ಕಾಂಗ್ರೆಸ್ ಘಟಕ ಸ್ವಾಗತಿಸಿದೆ.

ಗುರುವಾರ ನಿಟ್ಟೂರು ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ಅಧ್ಯಕ್ಷತೆಯಲ್ಲಿ ನಡೆದ ಪಕ್ಷ ಸಂಘಟನೆ ಸಭೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಲೋಕಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ನಡೆದ ಪಕ್ಷ ಪ್ರಮುಖರ ಸಭೆಯಲ್ಲಿ ಈ ತೀರ್ಮಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಸಭೆಯಲ್ಲಿ ಘಟಕ ಅಧ್ಯಕ್ಷ ನಾಗೇಂದ್ರ ಜೋಗಿ, ಮಂಜಪ್ಪ ಬೆನ್ನಟ್ಟೆ, ವಿಶ್ವನಾಥ ನಾಗೋಡಿ, ಚಂದಯ್ಯ ಜೈನ್, ರಾಮಚಂದ್ರ ಅಂಬಲಾಡಿ, ರವೀಶ್ ನಿಟ್ಟೂರು, ಸುರೇಶ್ ಕೆ.ಬಿ.ಸರ್ಕಲ್, ರಾಘವೇಂದ್ರಾಚಾರಿ, ನರಸಿಂಹ ಪೂಜಾರಿ, ಜೆ.ವಿ.ಸುಬ್ರಹ್ಮಣ್ಯ, ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!