ರಸಪ್ರಶ್ನೆ ; ರಾಜ್ಯ ಮಟ್ಟಕ್ಕೆ ಆಯ್ಕೆ

0 111


ಹೊಸನಗರ: ಕರ್ನಾಡಕ ಏಡ್ಸ್ ನಿಯಂತ್ರಣ ಮಂಡಳಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಯುವಜನೋತ್ಸವ -2023 ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ನಡೆದಿದ್ದು ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕಿನ ನಗರದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ 10ನೇ ತರಗತಿಯ ಅನನ್ಯ ಎಸ್.ಕೆ. ಹಾಗೂ 9ನೇ ತರಗತಿಯ ಸಾನಿಕ ಸಿ. ಯವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಒಟ್ಟು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ 21 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು
ದ್ವಿತೀಯ ಸ್ಥಾನವನ್ನು ಹೊಸನಗರದ ಖಾಸಗಿ ಶಾಲೆಯಾದ ಶ್ರೀ ಗುರುಜಿ ಇಂಟರ್ ನ್ಯಾಶನಲ್ ರೆಸಿಡೆನ್ಸಿಯಲ್ ಸ್ಕೂಲ್‌ನ ವಿದ್ಯಾರ್ಥಿಗಳಾದ ಮಧುರ ಆರ್ .ನಾಯಕ್ ಹಾಗೂ ಸುಬ್ರಮಣ್ಯ ಶೆಣೈಯವರು ಪಡೆದರು.


ಸಭೆಯ ಅಧ್ಯಕ್ಷತೆ ನ್ಯಾಶನಲ್ ಕಾಲೇಜ್‌ನ ಪ್ರಾಚಾರ್ಯರಾದ ಮಮತಾರವರ ವಹಿಸಿದ್ದರು. ಹೊಸನಗರ ಆರೋಗ್ಯ ಇಲಾಖೆಯ ಆಪ್ತ ಸಹಾಯಕಿ ಸುಷ್ಮಾ ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!