ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಉದಯನಿಧಿ ಪ್ರತಿಕೃತಿ ದಹಿಸಿ ವಿಹೆಚ್‍ಪಿ ಪ್ರತಿಭಟನೆ

0 39

ಚಿಕ್ಕಮಗಳೂರು: ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಅಜಾದ್ ವೃತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಭಾರತೀಯ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ತಮಿಳುನಾಡಿನ ಸರ್ಕಾರದ ಮಂತ್ರಿಯಾಗಿ ಸ್ವೀಕರಿಸಿದ ಉದಯ ನಿಧಿ ಸ್ಟಾಲಿನ್‌ರವರು ಸೆಪ್ಟೆಂಬರ್ 2. ರಂದು ನಡೆದ ಸತತ ಅಬಾಲಿಷನ್ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ ಸನಾತನ ಇಂದು ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತೆ ಹಿಂದೂ ಧರ್ಮವನ್ನು ಸೊಳ್ಳೆ, ಮಲೇರಿಯ, ಡೆಂಗ್ಯೂನಂತಹ ಕಾಯಿಲೆಗೆ ಹೋಲಿಸಿ ಭಾಷಣ ಮಾಡಿರುವುದನ್ನು ಖಂಡಿಸಿದರು.

ಸನಾತನ ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತಹ ಹೇಳಿಕೆ ನೀಡಿ ಹಿಂದುಗಳನ್ನು ಬೆದರಿಸುವ, ಭಯ ಹುಟ್ಟಿಸುವಂತಹ ಧರ್ಮದ ಆಧಾರದಲ್ಲಿ ಮೂಲೋಚ್ಚಾಟನೆ ಮಾಡುವಂತಹ ಅಪರಾಧ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಧರ್ಮದ ಆಧಾರದಲ್ಲಿ ಸನಾತನಿಗಳ ಡೆಂಗ್ಯೂ, ಮಲೇರಿಯಾಗಳಿಗೆ ಹೋಲಿಸಿ ಉದ್ದೇಶಪೂರ್ವಕ ಅವಮಾನ ಅಪಮಾನ ಮಾನಹಾನಿ ಮಾಡಿದ್ದಾರೆ. ವಿಶ್ವದಾದ್ಯಂತ ಹಿಂದುಗಳ ಭಾವನೆಯನ್ನು ಧಾರ್ಮಿಕತೆಯನ್ನು ಕಾಸಿಗೊಳಿಸಿದ್ದಾರೆ ಎಂದು ಮನವಿಯಲ್ಲಿ ಇರುತ್ತಾರೆ.

ತಮ್ಮ ಈ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕದಡಿ ಅಶಾಂತಿಯನ್ನು ದುರುದ್ದೇಶ ಪೂರ್ವಕವಾಗಿ ಮಾಡಿದ್ದು ಸಂವಿಧಾನ ಬದ್ಧವಾದ ಸಚಿವ ಸ್ಥಾನವನ್ನು ಅಲಂಕರಿಸಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಧರ್ಮದ ಮೂಲೋಚ್ಚಾಟನೆ ಮಾಡುವ ಮೂಲಕ ಕರೆ ನೀಡುವ ಮೂಲಕ ದ್ವೇಷಪೂರ್ಣ ಭಾಷಣ ಮಾಡಿ ಸಂವಿಧಾನ ಪ್ರತಿಜ್ಞೆ ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ ಎಂದು ದೂರಿದರು.

ಸನಾತನ ಹಿಂದೂ ಸಮಾಜದ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಿ ಸನಾತನ ಹಿಂದು ಧರ್ಮವನ್ನು ವಿದ್ವೇಶಕ್ಕೆ ಒಳಪಡಿಸುವ ಸನಾತನ ಹಿಂದೂ ಸಮಾಜದ ವಿರುದ್ಧ ದ್ವೇಷದ ವಾತಾವರಣ ನಿರ್ಮಾಣ ಮಾಡುವ ಭಾಷಣ ಮಾಡಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ವಿ.ಎಚ್.ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಕಾರ್ಯದರ್ಶಿ ರಂಗನಾಥ್ ಜಿಲ್ಲಾ ಸಂಯೋಜಕ ಸಿ.ಡಿ ಶಿವಕುಮಾರ್, ಶಾಮ್, ಯೋಗೀಶ್‌ರಾಜ್ ಅರಸ್, ದಿಲೀಪ್ ಶೆಟ್ಟಿ, ಸುನಿಲ್ ಆಚಾರ್ಯ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!