ಹೊಸನಗರದ ಮೇಘನಾಗೆ ಚೆನ್ನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

0 567

ಹೊಸನಗರ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಾಲಕೃಷ್ಣ ಹಾಗೂ ಕರಿಬಸಮ್ಮ ದಂಪತಿಗಳ ಪುತ್ರಿ ಕು|| ಮೇಘನಾ ಇಂದು ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಗಳಿಸಿ ಮಲೆನಾಡಿನ ಹಿರಿಮೆಗೆ ಗರಿ ಮೂಡಿಸಿದ್ದಾರೆ.

ಫೆಬ್ರವರಿ 3ರಂದು ಹರಿಯಾಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು ಈ ಪಂದ್ಯಾವಳಿಯಲ್ಲೂ ಕು|| ಮೇಘನಾ ಪಾಲ್ಗೊಳ್ಳಲಿದ್ದು ಅಲ್ಲಿಯೂ ಸಹ ಅವರು ಉತ್ತಮ ಪ್ರದರ್ಶನ ನೀಡಿ ಮಲೆನಾಡಿಗೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತರಲೆಂದು ಪಟ್ಟಣದ ನಾಗರಿಕರು ಆಶಿಸಿದ್ದಾರೆ.

Leave A Reply

Your email address will not be published.

error: Content is protected !!