ಕುರಿ ಮಂದೆ ಮೇಲೆ ಚಿರತೆ ದಾಳಿ ; 31 ಕುರಿಗಳು ಸಾವು !
ಕಡೂರು : ಪಟ್ಟಣದ ಹೊರವಲಯದ ಮಲ್ಲೇಶ್ವರದ ಬೈಪಾಸ್ ರಸ್ತೆ ಬದಿಯಲ್ಲಿರುವ ತೋಟದಲ್ಲಿ ಬೀಡುಬಿಟ್ಟಿದ್ದ ಕುರಿ (Sheep) ಮಂದೆ ಮೇಲೆ ಚಿರತೆ (Leopard) ದಾಳಿ ನಡೆಸಿದ್ದು, 14 ಮೇಕೆ ಮತ್ತು 17 ಕುರಿ ಮರಿಗಳು ಸಾವನ್ನಪ್ಪಿವೆ.
ಕಡೂರು (Kadur) ಪಟ್ಟಣದ ನಿವಾಸಿಗಳಾದ ಚಂದ್ರಶೇಖರ್, ಬಸವರಾಜ್, ಮಂಜು ಹಾಗೂ ಲಕ್ಷ್ಮಣ ಎಂಬುವವರ ಈ ಕುರಿಗಳನ್ನು ಸುಶೀಲಮ್ಮ ಎಂಬುವವರ ತೋಟದಲ್ಲಿ ಬಿಡಲಾಗಿತ್ತು.
ಪಶುವೈದ್ಯ ಇಲಾಖೆಯ ಡಾ.ಉಮೇಶ್ ಮತ್ತು ಸಿಬ್ಬಂದಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿದರು. 3 ಲಕ್ಷ ರೂ.ನಷ್ಟ ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ಲೋಕೇಶ್, ಉಪವಲಯ ಅರಣ್ಯಾಧಿಕಾರಿ ಹರೀಶ್ ಭೇಟಿ ನೀಡಿದ್ದರು.