ಹೊಸನಗರದಲ್ಲಿ ಪ್ರಪ್ರಥಮ ಬಾರಿಗೆ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ

0 1,177

ಹೊಸನಗರ : ಪಟ್ಟಣದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದಿ|| ಹೊಸಂಗಡಿ ಲಕ್ಷ್ಮಣ ಶೆಟ್ಟಿ ಸ್ಮರಣಾರ್ಥ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಹಾಗೂ 11ನೇ ವರ್ಷದ ವಾರ್ಷಿಕೋತ್ಸವ ಇಂದು ಇಲ್ಲಿನ ಈಡಿಗರ ಸಭಾಭವನದಲ್ಲಿ ಅದ್ದೂರಿಯಾಗಿ ನೆರವೇರಿತು.

AIKI ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಸಂಸ್ಥಾಪಕ ಅಧ್ಯಕ್ಷ ಶಿಹಾನ್ ಸಿ ಎ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹೊಸನಗರ ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಕೆ. ರವಿಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಆತ್ಮ ರಕ್ಷಣೆಯ ಏಕೈಕ ಕಲೆ ಕರಾಟೆ ಈ ಕಲೆಗೆ ಎಲ್ಲರ ಪ್ರೋತ್ಸಾಹ ಅಗತ್ಯ ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಕಲೆ ಅತ್ಯವಶ್ಯಕವಾಗಿದೆ. ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಮೊಬೈಲ್ ಬಳಕೆಯಿಂದ ದೂರವಿರಬೇಕು. ತೀವ್ರ ಅಗತ್ಯತೆಗೆ ಮಾತ್ರ ಮೊಬೈಲ್ ಬಳಸುವಂತೆ ಅವರು ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಕೃಷ್ಣಮೂರ್ತಿ, ಪತ್ರಕರ್ತ ರವಿ ಬಿದನೂರು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ರಾವ್, ತಾಲೂಕು ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷರು ವಕೀಲರಾದ ಜಿ ಮೋಹನ ಶೆಟ್ಟಿ ಚಂದ್ರಕಾಂತ ಭಟ್, ತಾಲೂಕು ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ಕೆ ರಾಘವೇಂದ್ರ, ಎನ್ ಎಸ್ ಹರೀಶ್ ಕುಮಾರ್, ಕೆ ವಿ ಲಕ್ಷ್ಮಣಾಚಾರ್ಯ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತಿ ಹೊಂದಿ ಮಾತನಾಡಿ, ಜಪಾನಿನ ಯುದ್ಧ ಕಲೆಯಾದ ಕರಾಟೆ ಇದೀಗ ಪ್ರಪಂಚ ಪ್ರಪಂಚದಾದ್ಯಂತ ಹರಡಿದ್ದು ಈ ಕಲೆ ಆತ್ಮ ರಕ್ಷಣೆ ಮೂಲ ಮಂತ್ರ ಹೊಂದಿದ್ದು ಈ ಕಲೆ ಹೆಣ್ಣು ಮಕ್ಕಳಿಗೆ ಅತ್ಯವಶ್ಯಕವಾಗಿದೆ. ಈ ಕಲೆಯಿಂದ ಆತ್ಮ ರಕ್ಷಣೆಯೊಂದಿಗೆ ಅಂಗ ಸೌಷ್ಟವತೆಯೊಂದಿಗೆ ದೈಹಿಕ ಸದೃಢತೆಗೆ ಪೂರಕವಾಗಿದೆ ಈ ಕಲೆಗೆ ಸರ್ಕಾರದ ಸೌಲಭ್ಯ ನೆರವು ಅಗತ್ಯವಾಗಿದೆ ಎಂದು ಅಭಿಪ್ರಾಯಸಿದರು.

ರಾಜ್ಯ ಮಟ್ಟದ ಈ ಸ್ಪರ್ಧೆಗೆ ಕು|| ರಚನಾ ವೆಂಕಟೇಶ್, ಬಳ್ಳಾರಿಯ ಮಿತೇಶ್, ಹೊಸಂಗಡಿಯ ಮೇಘನಾ ಎಂ ನಾಯಕ್, ನಯನ ಎಂ ನಾಯಕ್, ಕಬಳೆಯ ಸಾಕ್ಷಿತ, ನಿಲ್ಸ್ ಕಲ್ ಕೆ.ಟಿ ಸಿಂಚನ, ನಗರದ ಆಕಾಶ್ ಎಸ್ ಶೆಟ್ಟಿ, ಸುತ್ತಾದ ಶಿವಾನಿ ಶಿವಕುಮಾರ್, ಶಿವಮೊಗ್ಗದ ಮುಹೀಬ್, ನವೀನ್, ಸಾಧಿಕ್, ಮಂಜುನಾಥ, ಸಾಗರದ ಅಲೋಕ ಶಿಕಾರಿಪುರದ ಮಿಥುನ್, ತೀರ್ಥಹಳ್ಳಿಯ ಗಣೇಶ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ತೇಜಸ್ವಿನಿ ಜಿ ಯಾದವ್ ಸ್ವಾಗತಿಸಿದರು‌. ಅಶ್ವಿನಿ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಾದ್ಯಂತದ 700ಕ್ಕೂ ಹೆಚ್ಚು ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!