Hosanagara | ಬೆಳಂಬೆಳಗ್ಗೆ ಅಗ್ನಿ ಅನಾಹುತ, ಕೊಟ್ಟಿಗೆ ನಾಶ

0 1,306

ಹೊಸನಗರ : ಪಟ್ಟಣದ ಶಿವಮೊಗ್ಗ ರಸ್ತೆಯ ಶ್ರೀ ಗುರುಶಕ್ತಿ ಆಟೋಮೊಬೈಲ್ ಪಕ್ಕದ ಯಲ್ಲಪ್ಪ ಪೂಜಾರಿ ಎಂಬವರಿಗೆ ಸೇರಿದ ಚಂದಮ್ಮ ನಿವಾಸದ ಹಿಂಭಾಗದ ಬಚ್ಚಲಮನೆಗೆ ಬೆಳಿಗ್ಗೆ 7:30ರ ಸಮಯದಲ್ಲಿ ನೀರು ಕಾಯಿಸಲು ಬೆಂಕಿ ಹಾಕಿದ್ದು ಬೆಂಕಿಯ ಜ್ವಾಲೆ ಹೊಗೆ ಪೈಪಿನ ಒಳಗಡೆ ಆವರಿಸಿಕೊಂಡು ಬಚ್ಚಲು ಒಲೆಗೆ ಹೊಂದಿಕೊಂಡಂತಿದ್ದ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹುಲ್ಲಿನ ಪೆಂಡಿಗಳಿಗೆ ಬೆಂಕಿ ತಗುಲಿದ ಪರಿಣಾಮ ಇಡಿ ಕೊಟ್ಟಿಗೆಗೆ ಬೆಂಕಿ ಆವರಿಸಿಕೊಂಡು ಆತಂಕದ ಕ್ಷಣ ಹುಟ್ಟು ಹಾಕಿತ್ತು.

ಬೆಂಕಿ ಜ್ವಾಲೆ ಹೆಚ್ಚುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು ಅಗ್ನಿಶಾಮಕದ ಸಿಬ್ಬಂದಿಗಳ ತತ್ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು.

ಈ ಘಟನೆಯಿಂದ ಹೆಂಚು, ಪಕಾಶಿ, ಹುಲ್ಲು ಸೇರಿದಂತೆ ಕೆಲವು ವಸ್ತುಗಳು ಸುಟ್ಟು ಭಸ್ಮವಾಗಿದ್ದು ಮೂರು ಲಕ್ಷ ರೂ. ನಷ್ಟು ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಈ ಸಂಬಂಧ ತಹಶೀಲ್ದಾರ್ ರಶ್ಮಿ ಅವರಿಗೆ ಮಾಹಿತಿ ನೀಡಿರುವ ಬಗ್ಗೆ ತಿಳಿದು ಬಂದಿದೆ‌.

Leave A Reply

Your email address will not be published.

error: Content is protected !!