ಹೊಸನಗರ ; ಮಂಜುನಾಥ್ ನಿಧನ
ಹೊಸನಗರ: ಪಟ್ಟಣದ ಆರ್.ಕೆ ರಸ್ತೆ ನಿವಾಸಿ ಮಂಜುನಾಥ್ (44)ರವರು ಅನಾರೋಗ್ಯದ ಕಾರಣ ಹೊಸನಗರದ ತಮ್ಮ ಸ್ವಂತ ನಿವಾಸದಲ್ಲಿ ನಿಧನರಾಗಿದರು.
ಇವರು ಅವಿವಾಹಿತರಾಗಿದ್ದು ಸುಬ್ಬಾರಾವ್ರವರು ಸೇರಿ ಇಬ್ಬರು ಸಹೋದರರು, ಅಕ್ಕ, ತಾಯಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಸಂತಾಪ: ಇವರ ನಿಧನಕ್ಕೆ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ನಾಯ್ಕ್ ಗೌರವಾಧ್ಯಕ್ಷ ಬಿ.ಗೋವಿಂದಪ್ಪ, ಕಾರ್ಯದರ್ಶಿ ಹೆಚ್.ಆರ್ ಸುರೇಶ್, ಗುತ್ತಿಗೆದಾರರಾದ ಮಹಾಬಲ, ಹೆಚ್.ಶ್ರೀನಿವಾಸ್, ಕಟ್ಟೆ ಸುರೇಶ್ ಸಂಘದ ಪದಾಧಿಕಾರಿಗಳು ಯುವಕ ಸಂಘದ ಅಧ್ಯಕ್ಷ, ಸದಸ್ಯರುಗಳು ಹಾಗೂ ಗ್ರೇಡ್2ತಹಶೀಲ್ದಾರ್ ರಾಕೇಶ್ರವರು ಸಂತಾಪ ಸೂಚಿಸಿ ಇವರ ಆತ್ಮಕ್ಕೆ ಶಾಂತಿ ಕೋರಿದರು.