ಪತ್ನಿಗೆ ಚಾಕು ಚುಚ್ಚಿ ಆಸ್ಪತ್ರೆ ಬಳಿ ತಂದು ಹಾಕಿದ ಪತಿರಾಯ !
ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಸಮೀಪದ ಕೈನಲ್ಲಿ ಎಂಬ ಗ್ರಾಮದ ಮುರುಳಿ ಎಂಬಾತ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯ ಬಳಿ ಬಿಸಾಕಿ ಹೋದ ಅಮಾನವೀಯ ಘಟನೆ ಇಂದು ಸಂಜೆ ವೇಳೆ ನಡೆದಿದೆ.
ಬೆಂಗಳೂರು ಮೂಲದ ಮುರುಳಿ ಕೈನಲ್ಲಿಯ ಮಹಿಳೆಯನ್ನು ಮದುವೆಯಾಗಿದ್ದನು. ನಂತರ ಇಲ್ಲೇ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಆತ ತನ್ನ ಪತ್ನಿಯ ಮೇಲೆ ಭೀಕರ ರೀತಿಯಲ್ಲಿ ಹಲ್ಲೆ ನಡೆಸಿ ಆಸ್ಪತ್ರೆ ಬಳಿ ಬಿಸಾಕಿ ಹೋಗಿದ್ದಾನೆ.
ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಇತ್ತ ತಪ್ಪಿಸಿಕೊಂಡು ಹೋಗಿದ್ದ ಮುರುಳಿ ಎಂಬತನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.