ಚಿಕ್ಕಮಗಳೂರು: ಜನ ಕೊಟ್ಟ ಅಕಾರವನ್ನು ಎಂದಿಗೂ ದುರುಪಯೋಗಪಡಿಸಿಕೊಡಿಲ್ಲ. ಚಿಕ್ಕಮಗಳೂರಿನ ಅಭಿವೃದ್ಧಿ, ಜನ ಹಿತಕ್ಕೆ ಬಳಸಿಕೊಂಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಮತ್ತು ಶಾಸಕ ಸಿ. ಟಿ. ರವಿ ಹೇಳಿದರು.
ಕ್ಷೇತ್ರದ ದುಂಗೆರೆ, ಎಂಎಂಡಿ ಹಳ್ಳಿ, ದಂಬದಹಳ್ಳಿ, ನಲ್ಲೂರು, ಉಂಡೇದಾಸರಹಳ್ಳಿ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿ, ಸತತವಾಗಿ ಹಲವು ವರ್ಷದಿಂದ ನನ್ನನ್ನು ಗೆಲ್ಲಿಸಿದ್ದೀರಿ, ನನಗಿಂತ ಮೊದಲು ಸಗೀರ್ ಅಹಮದ್ ಅವರು 15 ವರ್ಷ ಶಾಸಕರಾಗಿ, 10 ವರ್ಷ ಮಂತ್ರಿಯಾಗಿದ್ದರು ಸಹ ಉಂಡೇ ದಾಸರಹಳ್ಳಿ ಸೇತುವೆ ನಿರ್ಮಾಣ ಮಾಡಲು ಬಿಜೆಪಿ ಸರಕಾರ ಬರಬೇಕಾಯಿತು. ಕಾಲು ಇಟ್ಟಲೆಲ್ಲ ಎರೆಮಣ್ಣಿನಲ್ಲಿ ಊತುಹೋಗುತ್ತಿದ್ದ ರಸ್ತೆಗಳನ್ನು ಡಾಂಬರ್ ರಸ್ತೆಗಳನ್ನಾಗಿ ಮಾಡಲಾಯಿತು. ರಸ್ತೆ ಮತ್ತು ಸೇತುವೆ ನಿರ್ಮಾಣವಾದ ಮೇಲೆ ಭೂಮಿಯ ಜತೆಗೆ ಜನರ ಬದುಕಿಗೂ ಬೆಲೆ ದೊರೆಯಿತೆಂದರು.
5 ಕೆ. ಜಿ ಅಕ್ಕಿಯ ಜತೆಗೆ 5 ಕೆ. ಜಿ ಸಿರಿದಾನ್ಯ, 75 ಯೂನಿಟ್ ವಿದ್ಯುತ್, 2 ಸಾವಿರ ರೂ. ವಿಧವಾ ವೇತನ 3 ಸಾವಿರ, ವಿಶೇಷಚೇತನರ ವೇತನ ಕೊಡಲು ಪಕ್ಷ ತೀರ್ಮಾನಿಸಿದೆ. ಎಸ್ಸಿ ಎಸ್ಟಿ ಒಳಮೀಸಲಾತಿಯನ್ನು ನೀಡಲಾಗುತ್ತಿದ್ದು, ನನ್ನ ಅವಧಿಯಲ್ಲಿ ಜಿಲ್ಲೆಗೆ 52 ಅಂಬೇಡ್ಕ ರ್ ಭವನವನ್ನು ಮಂಜೂರು ಮಾಡಿಸಲಾಗಿದೆ ಎಂದರು.
ಹೊಸನಗರ: ತಾಲ್ಲೂಕಿನ ವಾರಂಬಳ್ಳಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು ಈವರೆಗೂ ಬೇಡಿಕೆ ಈಡೇರದೆ ಚುನಾವಣೆ…
ರಿಪ್ಪನ್ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿಂದು ದರಗೆಲೆ ತರಲೆಂದು ಕಾಡಿಗೆ ತೆರಳಿದ್ದ ಕೂಲಿ ಕೆಲಸಗಾರ ತಿಮ್ಮಪ್ಪ…
ರಿಪ್ಪನ್ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ. ತಿಮ್ಮಪ್ಪ ಬಿನ್…
ರಿಪ್ಪನ್ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…
ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…
ರಿಪ್ಪನ್ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…