Categories: Chikkamagaluru

ಕುಡಿಯುವ ನೀರಿನ ಕಲ್ಯಾಣಿಗೆ ಗಣಪತಿ ವಿಸರ್ಜಿಸದಂತೆ ಒತ್ತಾಯ


ಚಿಕ್ಕಮಗಳೂರು : ಹಿರೇಮಗಳೂರು ಸಮೀಪ ದಲಿತರು ಉಪಯೋಗಿಸುವ ಕಲ್ಯಾಣಿಗೆ ನಗರ ಪ್ರದೇಶದ ಗಣಪತಿಗಳನ್ನು ವಿಸರ್ಜನೆ ಮಾಡಲು ತಯಾರಿ ನಡೆಸಿದ್ದು ಇದನ್ನು ಕೂಡಲೇ ಕೈಬಿಟ್ಟು ಬೇರೆಡೆ ಜಾಗ ಗುರುತಿಸಬೇಕು ಎಂದು ಗ್ರಾಮಸ್ಥರು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಒತ್ತಾಯಿಸಿದರು.


ಈ ಸಂಬಂಧ ಹಿರೇಮಗಳೂರು ಗ್ರಾಮದ ಹಿರಿಯ ಮುಖಂಡ ಜಾನಯ್ಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿ ಮಾತನಾಡಿದ ಅವರು ಕಳೆದ ಮರ‍್ನಾಲ್ಕು ತಲೆಮಾರಿಗಳಿಂದಲೂ ಇದೇ ಕಲ್ಯಾಣಿ ನೀರು ಸೇವಿಸುವ ಮೂಲಕ ದಲಿತ ಸಮುದಾಯವು ಜೀವನ ನಡೆಸಿಕೊಂಡು ಬರಲಾಗಿದೆ ಎಂದರು.


ಇದೀಗ ನಗರಸಭಾ ಆಡಳಿತವು ದಲಿತರ ಕಲ್ಯಾಣಿ ಮೇಲೆ ಕಣ್ಣುಬಿದ್ದಿದಂತಿದೆ. ನಗರದ ಬಹುತೇಕ ಗಣಪತಿ ಗಳನ್ನು ವಿಸರ್ಜನೆಗೊಳಿಸಲು ಬೇರೆ ಸ್ಥಳಾವಕಾಶ ಮಾಡುವ ಬದಲು ದಿನನಿತ್ಯ ಕುಡಿಯವ ನೀರು ಉಪಯೋ ಗಿಸುವ ಕಲ್ಯಾಣಿಗೆ ವಿಸರ್ಜಸಲು ತಯಾರಿ ನಡೆಸಿರುವುದು ಸೂಕ್ತ ನಿರ್ಧಾರವಲ್ಲ ಎಂದರು.


ಹಿರೇಮಗಳೂರು ಗ್ರಾಮದಲ್ಲಿ ಈಗಾಗಲೇ 400ಕ್ಕೂ ಹೆಚ್ಚು ದಲಿತ ಸಮುದಾಯಗಳಿವೆ. ಬಹುತೇಕ ಜನರು ಇದೇ ಕಲ್ಯಾಣಿಯಿಂದ ಕುಡಿಯುವ ನೀರು ಸೇವಿಸುತ್ತಿದ್ದಾರೆ. ಆದರೆ ನಗರಸಭಾ ಆಡಳಿತವು ಗಣಪತಿ ವಿಸರ್ಜನೆಗೆ ಕಲ್ಯಾಣಿಯತ್ತ ದಾರಿ ಮಾಡಲು ಹೊರಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.


ನಗರಸಭೆಯ ಕುಡಿಯುವ ಯಗಚಿ ನೀರಿನ ಮೋಟಾರ್ ಸುಟ್ಟುಹೋದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕುಡಿ ಯುವ ನೀರನ್ನು ಇದೇ ಕಲ್ಯಾಣಿಯಿಂದ ಬಳಸಲಾಗುತ್ತಿದೆ. ಇತ್ತೀಚೆಗೆ ಮೋಟಾರ್ ದುರಸ್ಥಿಪಡಿಸಿ ಸಮರ್ಪಕ ನೀರು ಒದಗಿಸಿದ್ದರೂ ಗಣೇಶನ ವಿಗ್ರಹ ವಿಸರ್ಜಿಸುವ ಈ ಕಲ್ಯಾಣಿ ಬಳಸಿದರೆ ಮಲೀನಗೊಳ್ಳಲಿದೆ ಎಂದರು.
ಆದ್ದರಿAದ ನಗರಸಭಾ ಆಡಳಿತ ಮಂಡಳಿಯು ಕುಡಿಯುವ ನೀರಿಗೆಂದು ಉಪಯೋಗಿಸುವ ಕಲ್ಯಾಣಿಗೆ ಗಣಪತಿ ವಿಸರ್ಜಿಸುವ ಬದಲು ಬೇರೆಡೆ ಜಾಗ ಗುರುತಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು.


ಈ ಸಂದರ್ಭದಲ್ಲಿ ಹಿರೇಮಗಳೂರು ಗ್ರಾಮಸ್ಥರಾದ ಕೇಶವಮೂರ್ತಿ, ವೆಂಕಟೇಶ್, ಗಂಗಾಧರ್, ರವಿಕು ಮಾರ್, ಜಯಣ್ಣ, ನಂದನ್, ನಟರಾಜ್ ಹಾಜರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

6 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

10 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

10 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

12 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

13 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

20 hours ago