Categories: Featured-Article

ದೇವರಸಲಿಕೆಯಲ್ಲಿ ಏಕಪವಿತ್ರ ನಾಗಮಂಡಲೋತ್ಸವಕ್ಕೆ ಭರದ ಸಿದ್ಧತೆ

ರಿಪ್ಪನ್‌ಪೇಟೆ: ದೇವರಸಲಿಕೆ ಗ್ರಾಮದ ಶ್ರೀಈಶ್ವರ ದೇವಸ್ಥಾನ ಸಮಿತಿಯರು ಫೆಬ್ರವರಿ 11 ಮತ್ತು 12 ರಂದು ಆಯೋಜಿಸಲಾಗಿರುವ ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಪೂರ್ವ ಸಿದ್ದತಾ ಕಾರ್ಯಕ್ರಮದ ಭರದಿಂದ ಸಾಗಿದೆ.

ದೇವರಸಲಿಕೆ ಕುಟುಂಬದವರ ಮೂಲ ನಾಗಬನ ಕೇಶವಗೌಡರ ಮನೆ ಹತ್ತಿರದಲ್ಲಿ ಮುಂಬಾರು ಗ್ರಾಮಸ್ಥರು ಸಹಯೋಗದಲ್ಲಿ ಆಯೋಜಿಸಲಾಗಿರುವ ಏಕಪವಿತ್ರ ನಾಗಮಂಡಲೋತ್ಸವ ಫೆಬ್ರವರಿ 11 ರಂದು ಶಂಕರನಾರಾಯಣದ ಪುರೋಹಿತರಾದ ಶ್ರೀ ಸೂರ್ಯನಾರಾಯಣ ಬಾಯರು ಮತ್ತು ಬಳಗ ಹಾಲಾಡಿ ವೆಂಕಟೇಶ ಹಂಜಾರರು, ಅಂಪಾರು ಸರ್ವೋತ್ತಮ ವೈದ್ಯರು, ಪಾಕಶಾಸ್ತ್ರಜ್ಞರಾದ ಶಂಕರನಾರಾಯಣ ವಾದ್ಯ ವೃಂದ ಉಮೇಶ ದೇವಾಡಿಗ ಮತ್ತು ಬಳಗ ಸೌಡ ಇವರ ನೇತೃತ್ವದಲ್ಲಿ ಫೆಬ್ರವರಿ 11 ರಂದು ಬೆಳಗ್ಗೆ 9 ಗಂಟೆಗೆ ಪಂಚಗವ್ಯ, ಶುದ್ದ ಪುಣ್ಯಾಹ ಸರ್ಪಸಂಸ್ಕಾರ ಅಂತ್ಯ ನವಗ್ರಹ ಯಾಗ ಬಿಂಬ ಶುದ್ದಿ ಅಧಿವಾಸ ಹೋಮ ನಾಗಶಿಲೆ ಪ್ರತಿಷ್ಠಾಪನೆ ಕಲಶಾಭಿಷೇಕ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಸಂಜೆ 6 ಗಂಟೆಯಿಂದ ಆಶ್ಲೇಷ ಬಲಿ ಮಂಡಲ ಮಂಟಪ ವಾಸ್ತು ಪೂಜಾ ಬಲಿ ಅಸ್ತ್ರಹೋಮ ಪ್ರಾಕಾರ ಬಲಿ 12 ರಂದು ಬೆಳಗ್ಗೆ 9 ರಿಂದ ಗಣೇಶ ಪೂಜಾ ಪುಣ್ಯಾಹ ಮಧುಪರ್ಕ ಪೂಜೆ ಪಂಪವಿಂಶತಿ ಕಲಶ ಸ್ಥಾಪನೆ ಅಯುತ ಸಂಖ್ಯಾತಿಲ ಹೋಮ ಪ್ರಾಯಶ್ಚಿತ ಪವಮಾನ ಹೋಮ ತತ್ವ ಹೋಮ ಪ್ರಧಾನ ಹೋಮ, ಉದ್ಯಾಪನಾ ಹೋಮ ವೇದ ಪಾರಾಯಣ ಗಾಯಿತ್ರಿ ಜಪ ಮೂಲಮಂತ್ರ ಜಪ ಕಲಶಾಭೀಷೇಕ ಮಹಾಪೂಜೆ ವಟು ಬ್ರಾಹ್ಮಣ ಸುಹಾಸನಿ ಕನ್ನಿಕಾ ಪೂಜಾ ದಂಪತಿ ಪೂಜಾ ಅಚಾರ್ಯ ಪೂಜಾ ರಾತ್ರಿ 8 ಗಂಟೆಗೆ ಮಂಡಲಪೂಜೆ ಮಂಡಲೋತ್ಸವ ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆನಂದಪುರ ಮುರುಘಾಮಠ, ರಾಮಚಂದ್ರಪುರ ಮಠ ಹೊಂಬುಜ ಜೈನ ಮಠ, ಮಳಲಿಮಠ, ಕೋಣಂದೂರು, ಮೂಲೆಗದ್ದೆ ಕವಲೇದುರ್ಗ, ನಿಟ್ಟೂರು ಹಾಗೂ ಸಿಗಂದೂರು ದೇವಸ್ಥಾನದ ಧರ್ಮದರ್ಶಿಗಳು ಹೀಗೆ ಹಲವು ಮಠಗಳ ಪೂಜ್ಯರು ನಾಡಿನ ರಾಜಕೀಯ ಮುಖಂಡರು ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು ಎಂದು ದೇವರಸಲಿಕೆ ಕುಟುಂಬದವರ ಮೂಲ ನಾಗಬನ ಕೇಶವಗೌಡರು ಮಾಧ್ಯಮಪ್ರತಿನಿಧಿಗಳಿಗೆ ವಿವರಿಸಿದರು.

ರಿಪ್ಪನ್‌ಪೇಟೆಯಲ್ಲಿ ಶರಣರು ಕಂಡ ಶಿವ ಪ್ರವಚನ :
ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಭಾ ಭವನದಲ್ಲಿ ಫೆಬ್ರವರಿ 8 ರಿಂದ 28 ರವರೆಗೆ ಪ್ರತಿದಿನ ರಾತ್ರಿ 8 ರಿಂದ 9 ಗಂಟೆಯವರೆಗೆ ಮಹಾಶಿವರಾತ್ರಿಯ ಅಂಗವಾಗಿ ಮಹಾನ್ ತಪಸ್ವಿ ಬಾಲ ಬ್ರಹ್ಮಚಾರಿಗಳು ಡಾ.ಬಿ.ಕೆ.ಬಸವರಾಜ ರಾಜಋಷಿಗಳು ಇವರಿಂದ “ಶರಣರು ಕಂಡ ಶಿವ’’ ಪ್ರವಚನ ಮಾಲೆ ಜರುಗಲಿದೆ.

Malnad Times

Share
Published by
Malnad Times

Recent Posts

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

1 hour ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

3 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

16 hours ago

ಹೆಮ್ಮಕ್ಕಿ ಶ್ರೀ ಭದ್ರಕಾಳಿ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಜೀರ್ಣಾಷ್ಟಬಂಧ ಮತ್ತು ಬ್ರಹ್ಮ ಕಲಶಾಭಿಷೇಕ

ಕಳಸ : ತಾಲ್ಲೂಕಿನ ಹೆಮ್ಮಕ್ಕಿಯ ಶ್ರೀ ಭದ್ರಕಾಳಿ ಅಮ್ಮನವರಿಗೆ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಮೇ 01 ರಿಂದ ಮೇ…

18 hours ago

ರಜತ ಉತ್ಸವದ ಗಣಪತಿ ಮೂರ್ತಿಯನ್ನು ದೇವಸ್ಥಾನಕ್ಕೆ ಸಮರ್ಪಣೆ

ರಿಪ್ಪನ್‌ಪೇಟೆ: ನಾಳೆ ನಡೆಯುವ ಶ್ರೀಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವಕ್ಕೆ ಇಲ್ಲಿನ ಗಣೇಶಪ್ರಸಾದ್ ಹೋಟೆಲ್‌ನ ದಿ.ರೇವತಿ ಹೆಬ್ಬಾರ್ ಮತ್ತು ಸತ್ಯನಾರಾಯಣ ಹೆಬ್ಬಾರ್ ಸ್ಮರಣಾರ್ಥ…

18 hours ago

ರಾಜಕೀಯದ ಪರಿಜ್ಞಾನವೇ ಇಲ್ಲದವರು ಸಂಸತ್‌ಗೆ ಹೋದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹೇಗೆ ಸಾಧ್ಯ ; ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಭೌಗೋಳಿಕ ಹಿನ್ನಲೆಯ ಅರಿವೇ ಇಲ್ಲದೆ, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರೇ ಇಲ್ಲದ…

19 hours ago