ಹಾವು ಕಚ್ಚಿ ಜನಪದ ಕಲಾವಿದೆ ಸಾವು !

0 101

ಸಾಗರ: ಹಾವು ಕಚ್ಚಿದ ಪರಿಣಾಮ ಜನಪದ ಕಲಾವಿದೆ ಸಂಗಿ ಭರ್ಮಮ್ಮ ಸಾವನ್ನಪ್ಪಿರುವ ಘಟನೆ ತಾಲೂಕಿನ ಆನಂದಪುರ ಸಮೀಪ ನಡೆದಿದೆ.


ಕಣ್ಣೂರು ಗ್ರಾಮದ ಸಂಗಿ ಭರ್ಮಮ್ಮ (80) ಮಂಗಳವಾರದಂದು ಹೊಲಕ್ಕೆ ಹೋದ ಸಂದರ್ಭದಲ್ಲಿ ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಸೋಬಾನೆ ಪದ ಮೊದಲಾದ ಜನಪದ ಹಾಡುಗಳ ಕಲಾವಿದರಾಗಿದ್ದ ಅವರು, ಯುವ ಪೀಳಿಗೆಗೆ ತರಬೇತಿ ಸಹ ನೀಡುತ್ತಿದ್ದರು. ಭರ್ಮಮ್ಮ ಅವರ ನಿಧನಕ್ಕೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!