ಎಲ್ಲರನ್ನು ಸಂತೈಸಿ, ತೃಪ್ತಿಪಡಿಸಿ ಸಮಾಧಾನ ನೀಡುವವಳು ತಾಯಿ – ಶ್ರೀಗಳು

ರಿಪ್ಪನ್‌ಪೇಟೆ: ಹಿಂದಿನ ದಿನಮಾನಗಳಲ್ಲಿ ರಾಕ್ಷಸರನ್ನು ಸಂಹಾರ ಮಾಡಲು ಅವತರಿಸಿದವಳನ್ನು ಶಕ್ತಿ ದೇವತೆ ಎಂದು ಕರೆಯುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಮನೆಯ ಸರ್ವಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ದೇವತೆಯಾಗಿ ‘ತಾಯಿ’ ರೂಪುಗೊಂಡಿದ್ದಾಳೆ ಎಂದು ಆನಂದಪುರದ ಮುರಘರಾಜೇಂದ್ರ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ವಡಗೆರೆ ಶ್ರೀ ತುಳಜಾ ಭವಾನಿ ದೇವಸ್ಥಾನದ 7ನೇ ವರ್ಷದ ಪ್ರತಿಷ್ಠಾವರ್ಧಂತ್ಯೋತ್ಸವ ಧಾರ್ಮಿಕ ಸಮಾರಂಭದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ತುಳಜಾ ಭವಾನಿ, ಚಾಮುಂಡೇಶ್ವರಿ, ದುರ್ಗಾಮಾತ ಎಂದು ದೇವಿಯ ನಾನಾ ರೂಪಗಳಿವೆ. ಸಂದರ್ಭಕ್ಕೆ ಅನುಸಾರವಾಗಿ ವಿವಿಧ ರೂಪವನ್ನು ಪಡೆದುಕೊಂಡಿರುತ್ತಾಳೆ. ಆದರೆ ಎಲ್ಲಾ ದೇವಿಯರ ಶಕ್ತಿ ಒಂದೇ ಆಗಿರುತ್ತದೆ. ಉಗ್ರಸ್ವರೂಪಿ ದೇವಿಯರ ಅವತಾರವೇ ರಾಕ್ಷಸರ ಸಂಹಾರವಾಗಿದ್ದು, ಅಂದಿನಕಾಲದ ಹಾಗೆ ವಿಕಾರ ರೂಪವನ್ನು ಹೊಂದಿರುವ ಅಘಾದಶಕ್ತಿಯ ದುಷ್ಟರಾಕ್ಷಸರು ಈಗಿಲ್ಲ. ಆದರೆ ಹತ್ತು ತಲೆಯವರು ಇದ್ದಾರೆ. ಬೇರೆಬೇರೆ ಯೋಚನೆ, ಇನ್ನೊಬ್ಬರಿಗೆ ತೊಂದರೆ ನೀಡುವುದು, ಅಶಾಂತಿಯನ್ನು ಸೃಷ್ಠಿಸುವುದು ಇವರುಗಳು ಈಗ ನಮ್ಮನಿಮ್ಮ ನಡೆವೆ ಇರುವ ರಾಕ್ಷಸರು. ನಿಜವಾಗಿಯೂ ಮನೆಯ ಒಡತಿ ತಾಯಿ. ಮನೆಯಲ್ಲಿನ ಎಲ್ಲಾ ಕೆಲಸಗಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಫಲಾಪೇಕ್ಷೆಯಿಲ್ಲದೆ ಮಾಡಿ ಮನೆಮಂದಿ ಎಲ್ಲರನ್ನು ಸಂತೈಷಿ, ತೃಪ್ತಿ ಪಡಿಸಿ ಸಮಾಧಾನ ನೀಡುವವಳು ತಾಯಿ. ಭೂಮಿ, ನೀರು, ಅನ್ನ ಎಲ್ಲವನ್ನು ತಾಯಿ ಎಂತಲೆ ಸಂಭೋದಿಸುತ್ತೇವೆ. ಹೆಣ್ಣು ಮಕ್ಕಳಿಲ್ಲದ ಮನೆ ಸುಂದರವಾಗಿರಲಾರದು. ಮನೆಯ ನಾಲ್ಕು ಮಕ್ಕಳು ವಿವಿಧ ವ್ಯಕ್ತಿತ್ವನ್ನು ಹೊಂದಿದ್ದರೂ ಎಲ್ಲರನ್ನು ಸಮಾನವಾಗಿ ಪೋಷಿಸುವವಳು ತಾಯಿ. ಆದ್ದರಿಂದ ತಾಯಿಯ ರೂಪವೇ ದೇವಿ. ಬೇರೆಬೇರೆ ಹೆಸರಿನಿಂದ ಕರೆಯಲ್ಪಟ್ಟರು ಸ್ವರೂಪ ಒಂದೇ ಆಗಿದೆ. ದೇವಸ್ಥಾನದಲ್ಲಿ ತುಳಜಾ ಭವಾನಿಯನ್ನು ಆರಾಧಿಸಿ, ತಮ್ಮ ಮನೆಯಲ್ಲಿ ಮಾತೃಸ್ವರೂಪಯವರನ್ನು ಗೌರವಿಸಿದರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅತೀವಿರಳವಾಗಿರುವ ರಜಪೂತ ಜನಾಂಗದವರು ವಡಗೆರೆಯಲ್ಲಿ ಒಂದೆಡೆ ನೆಲೆಸಿದ್ದಾರೆ. ಹಿಂದಿನ ಕಾಲದಲ್ಲಿ ರಾಜಾಸ್ತಾನದಿಂದ ಬಂದ ವಲಸಿಗರಾಗಿದ್ದರೂ ಧೈರ್ಯ, ಸಹಾಸ, ಪೌರುಷ, ದೇಶ ಪ್ರೇಮಗಳು ಇವರಲ್ಲಿ ರಕ್ತಗತವಾಗಿವೆ. ಆದ್ದರಿಂದಲೇ ಈ ಗ್ರಾಮದಲ್ಲಿ ಅನೇಕ ಜನರು ದೇಶದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಹೆಸರು ಗಳಿಸಿದ್ದಾರೆ. ಸಾಹಸಮಯ ಬದುಕಿನಿಂದ ಚಿರಪರಿಚಿತರಾಗಿದ್ದಾರೆ. ಶಕ್ತಿ ದೇವತೆ ತುಳಜಾ ಭವಾನಿಯ ಆರಾಧನೆಯಿಂದ ಈ ಗ್ರಾಮ ಸುಭೀಕ್ಷವಾಗಿ ಇಲ್ಲಿನ ಜನರು ಇತರರಿಗೆ ಸದಾ ಮಾದರಿಯಾಗಿರಲಿ ಎಂದು ಶುಭಹಾರೈಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಸುರೇಶ್ ಸಿಂಗ್ ವೈ., ನಾಗೇಶ್ವರಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಶ್ರೀವಾಸಭಟ್ ಅಲಸೆ, ಸುರೇಶ್ ಸಿಂಗ್ ಇನ್ನಿತರರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

4 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

4 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

4 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

4 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

4 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 days ago