ಹೊಸನಗರ: ಸೋಮವಾರ ಬೆಳಿಗ್ಗೆ ಬೈಕಿನಲ್ಲಿ ಪತ್ರಿಕೆ ವಿತರಿಸುವ ಸಂದರ್ಭದಲ್ಲಿ ರಾಮಕೃಷ್ಣ ವಿದ್ಯಾಲಯದ ಹಿಂಭಾಗ ಭಾನುವಾರ ರಾತ್ರಿಯ ಗಾಳಿ ಮಳೆಗೆ ವಿದ್ಯುತ್ ಮೈನ್ ಲೈನ್ ತಂತಿ ನೆಲಕ್ಕೆ ಬಿದ್ದಿದ್ದು ಅದನ್ನು ಹತ್ತಿರದಿಂದ ಗಮನಿಸಿದ ಪತ್ರಿಕಾ ವಿತರಕ ವಿಜೇಂದ್ರ ಪ್ರಭುರವರು ಸೂಕ್ಷ್ಮತೆಯಿಂದ ಗಮನಿಸಿ ಬೈಕ್ ನಿಲ್ಲಿಸಿದ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಡೆದಿದೆ.
ಎಂದಿನಂತೆ ಬೆಳಿಗ್ಗೆ 6ಗಂಟೆಗೆ ಪ್ರತಿ ಮನೆಗಳಿಗೆ ದಿನ ಪತ್ರಿಕೆಯನ್ನು ವಿತರಿಸುತ್ತಾ ಐ.ಬಿ ರಸ್ತೆಯಲ್ಲಿರುವ ರಾಮಕೃಷ್ಣ ವಿದ್ಯಾಲಯದ ಹಿಂಭಾಗದಲ್ಲಿ ಪತ್ರಿಕೆ ವಿತರಿಸುವ ಸಲುವಾಗಿ ಹೋಗಿದ್ದಾರೆ. ಭಾರೀ ಪ್ರಮಾಣದಲ್ಲಿ ಹೊಸನಗರದಲ್ಲಿ ಮಳೆ ಬೀಳುತ್ತಿದ್ದರಿಂದ ನಿಧಾನವಾಗಿ ಬೈಕ್ ಚಲಾಯಿಸುತ್ತಿದ್ದಾಗ ಸಮೀಪ ಮೈನ್ ಲೈನ್ ವಿದ್ಯುತ್ ಲೈನ್ ತಂತಿ ಕೆಳಗೆ ಬಿದ್ದಿದ್ದು ವಿತರಕ ತಕ್ಷಣ ಬೈಕ್ ನಿಲ್ಲಿಸದ್ದಿದ್ದರೇ ವಿದ್ಯುತ್ ತಂತಿಗೆ ಬೈಕ್ ತಗುಲಿದ್ದರೇ ಅಲ್ಲೇ ದುರ್ಘಟನೆ ನಡೆಯುತ್ತಿತ್ತು ವಿತರಕನ ಸಮಯ ಪ್ರಜ್ಞೆಯಿಂದ ಸಾವಿನ ಅಂಚಿನಿಂದ ಪಾರಾಗಿದ್ದು ತಕ್ಷಣ ಮೆಸ್ಕಾಂ ಇಲಾಖೆಯವರ ಗಮನಕ್ಕೆ ತಂದು ವಿದ್ಯುತ್ ನಿಲುಗಡೆಗೊಳಿಸಿದ್ದಾರೆ.
ಸ್ಪಂದಿಸಿದ ಮೆಸ್ಕಾಂ ಇಲಾಖೆ:
ಪತ್ರಿಕಾ ವಿತರಕ ವಿಜೇಂದ್ರ ಪ್ರಭುರವರು ತಂತಿ ಕಟ್ ಆಗಿರುವುದನ್ನು ಮೆಸ್ಕಾಂ ಇಲಾಖೆಯ ಜೆ.ಇ.ಇ ಚಂದ್ರಶೇಖರ್ರವರ ಗಮನಕ್ಕೆ ತಂದಿದ್ದರಿಂದ ಈ ರಸ್ತೆಯಲ್ಲಿ ಓಡಾಟ ನಡೆಸುವ ಸಾರ್ವಜನಿಕರುಗಳ ಹಾಗೂ ಪ್ರಾಣಿ ಪಕ್ಷಿಗಳು ಜೀವ ಉಳಿಸಿದ್ದಾಂತಾಗಿದೆ.
ಚಿಕ್ಕಮಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 03 ರಂದು…
ರಿಪ್ಪನ್ಪೇಟೆ: ಇಂದು ಬೆಳಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ್ದ ರೈತ ತಿಮ್ಮಪ್ಬ ಎಂಬ ರೈತ ಆನೆ ದಾಳಿಗೆ ಬಲಿಯಾಗಿದ್ದು ಮೃತ…
ಹೊಸನಗರ : ಮೇ 03 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ರಿಪ್ಪನ್ಪೇಟೆ: ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ನಮ್ಮ ಹೃದಯಗಳಲ್ಲಿ ನೆಲೆಸುತ್ತಾನೆ. ಶ್ರದ್ದಾಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಶಾಂತಿ ನೆಮ್ಮದಿ ಕರುಣಿಸುತ್ತಾನೆಂದು…
ರಿಪ್ಪನ್ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ನಿಮಿತ್ತ ಮೇ…
ಹೊಸನಗರ: ತಾಲ್ಲೂಕಿನ ವಾರಂಬಳ್ಳಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು ಈವರೆಗೂ ಬೇಡಿಕೆ ಈಡೇರದೆ ಚುನಾವಣೆ…