ಹೊಸನಗರ: “ನಾನು ಸಾಯೋಕ್ಕಿಂತ ಮುಂಚೆ ಬೇಳೂರರನ್ನು ನೋಡಬೇಕು, ಅವರನ್ನು ಈ ಬಾರಿ ನಾನೊಂದು ಓಟು ಹಾಕಿ ಗೆಲ್ಲಿಸಬೇಕು, ದಯವಿಟ್ಟು ನನ್ನ ಬದುಕಿಸಿ…”
ಇದು ಇಲ್ಲಿನ ಬಾಣಿಗ ಗ್ರಾಮದ ಪೂಜಾರಿಜಡ್ಡು ನಿವಾಸಿ, ಬೇಳೂರು ಗೋಪಾಲಕೃಷ್ಣ ಅವರ ಅಪ್ಪಟ ಅಭಿಮಾನಿ ಹುಟ್ಟು ಅಂಗವಿಕಲ ಉಮಾಪತಿ ಅವರ ಕೋರಿಕೆ. ಕೆಲವು ವರ್ಷದಿಂದ ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಅವರು, ಇತ್ತೀಚೆಗೆ ತೀವ್ರವಾಗಿ ಕಾಯಿಲೆಗೆ ತುತ್ತಾಗಿದ್ದು, ಉಮಾಪತಿಯವರ ಕೊನೆಯ ಕೋರಿಕೆಯೇ ಮಾಜಿ ಶಾಸಕ ಹಾಗೂ ಹಾಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವುದು. ಹಾಗೂ ಕೊನೆಯದಾಗಿ ಅವರ ಮುಖ ನೋಡಿ ಮಾತಾಡಿಸಬೇಕು ಅನ್ನುವುದು.
ಸೋಮವಾರ ಬೆಳಿಗ್ಗೆ ಸ್ಥಳೀಯ ನಾಯಕರಿಗೆ ಸ್ವತಃ ಕರೆ ಮಾಡಿ ತನ್ನ ಮನದ ಇಂಗಿತವನ್ನು ಉಮಾಪತಿ ಹೇಳಿದ್ದಾರೆ. ತಕ್ಷಣ ಅವರ ನಿವಾಸಕ್ಕೆ ಬೇಟಿ ನೀಡಿದ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗ, ಉಮಾಪತಿ ಕಾಯಿಲೆಯಿಂದ ನಿತ್ರಾಣಗೊಂಡಿದ್ದನ್ನು ಗಮನಿಸಿ, ತಕ್ಷಣ ಮಾರುತಿಪುರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕರೆದುಕೊಂಡು ಬಂದು ತೋರಿಸಿದ್ದಾರೆ. ಅವರ ಬಿಪಿ ಹೆಚ್ಚಾಗಿದ್ದು, ತೀವ್ರವಾಗಿ ಬಳಲಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ. ಉಮಾಪತಿ ಅವರನ್ನು ತಕ್ಷಣವೇ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗದ ವತಿಯಿಂದ ಆಂಬುಲೆನ್ಸ್ ಮೂಲಕ ಕರೆದೊಯ್ದು, ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಭಿಮಾನಿ ಬಳಗದ ಮಂಜು ಸಣ್ಣಕ್ಕಿ, ಮಂಜುನಾಥ್ ಬ್ಯಾಣದ, ಬಸವರಾಜ್ ಗಗ್ಗ, ರೋಹಿತ್ ಚಿಕ್ಕಮಣತಿ, ವಿಜಿತ್ ಗೌಡ, ಗೋಪಿನಾಥ್ ಜಯನಗರ, ರಾಜು ಎರಗಿ, ಸತೀಶ್ ಮೊದಲಾದವರು ಉಮಾಪತಿಯ ನೆರವಿಗೆ ಧಾವಿಸಿದರು.
ದೂರವಾಣಿಯಲ್ಲೆ ಸಮಾಧಾನದ ಮಾತನಾಡಿ, ಭೇಟಿಯ ಭರವಸೆ ನೀಡಿದ ಬೇಳೂರು
ಚುನಾವಣೆಯ ಪ್ರಚಾರ ಸಭೆಯಲ್ಲಿದ್ದ ಬೇಳೂರು ಗೋಪಾಲಕೃಷ್ಣ ಅವರು, ದೂರವಾಣಿ ಮೂಲಕ ಮಾತನಾಡಿ ಉಮಾಪತಿಯವರನ್ನು ಸಮಾಧಾನಿಸಿದರು. ಬೇಗ ಗುಣಮುಖರಾಗುವಂತೆ ಹಾರೈಸಿ, ಇನ್ನೆರೆಡು ದಿನದಲ್ಲಿ ಭೇಟಿ ಮಾಡವ ಭರವಸೆಯನ್ನೂ ನೀಡಿದ್ದಾರೆ.
ಬಡತನದಲ್ಲಿ ಬೇಯುತ್ತಿರುವ ಕುಟುಂಬ
ಉಮಾಪತಿ ಸೇರಿದಂತೆ ಕುಟುಂಬದ ಮೂರು ಮಂದಿ ಸಹೋದರರು ಕೂಡ ಹುಟ್ಟು ಅಂದರು. ಎಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತಿರುವ ಸಹೋದರರು ಎಲ್ಲರೂ ತೀವ್ರ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದಾರೆ.
ಹುಟ್ಟು ಕುರುಡನಾಗಿ ಹಾಗೂ ದೈಹಿಕ ಅಸಮರ್ಥತೆಯಿಂದ, ಇದೀಗ ತೀವ್ರ ತರದ ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಉಮಾಪತಿ, ಪತ್ನಿ ಹಾಗೂ ಎರಡು ಚಿಕ್ಕ ಮಕ್ಕಳನ್ನು ಹೊಂದಿದ್ದಾರೆ. ಹೊತ್ತಿನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ತಲುಪಿರುವ ಕುಟುಂಬಕ್ಕೆ ದಾನಿಗಳ, ಮಾನವೀಯ ಕೈಗಳ ಸಹಕಾರ ಕೂಡ ಬೇಕಿದೆ.
ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…
ರಿಪ್ಪನ್ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…
ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…
ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ನಗರದ ಫ್ರೀಡಂ ಪಾರ್ಕ್ನಲ್ಲಿ ಗೀತಾಶಿವರಾಜ್ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…
ರಿಪ್ಪನ್ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…