ಹೊಸನಗರ: ಯೋಗವೆಂಬುದು ಮನುಷ್ಯನ ಸಾಧನೆಗೆ ಒಂದು ಕೊಂಡಿಯಾಗಿದ್ದು ಉದ್ದೇಶ ಸಾಧನೆಗೆ ಯೋಗವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದು ಹೊಸನಗರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಿನಾಯಕ ನಾವುಡರವರು ಹೇಳಿದರು.
ಪಟ್ಟಣದ ನೆಹರು ಮೈದಾನದಲ್ಲಿ ಇಂದು ಯೋಗ ದಿನದ ಅಂಗವಾಗಿ ಪ್ರೌಢ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಯೋಗ ತರಬೇತಿ ನೀಡಿ ಮಾತನಾಡಿ, ಯೋಗ ಇದು ಉದ್ದಾಂತ ವೇದಾಂತ ಚಿಂತನೆ ಮಹಾತ್ಮಗಾಂಧಿಯವರ ಅಹಿಂಸೆಯ ಚಿಂತನೆಯ ನಂಬಿಕೆ ಮತ್ತು ಆಚರಣೆ ವಸುದೈವ ಕುಟುಂಬಕಂ ಚಿಂತನೆಯ ಮುಂದುವರೆದ ಭಾಗ ಎಂದು ಪರಿಗಣಿಸಲಾಗಿದೆ. ಮನುಕುಲದ ಒಗ್ಗಟ್ಟಿಗೆ ಒಂದು ಕುಟುಂಬ ಎನ್ನುವ ಪರಿಕಲ್ಪನೆ ಇದು ನೀಡುತ್ತಿದೆ ಒಡೆದ ಜಗತ್ತನ್ನು ಒಗ್ಗೂಡಿಸುವುವಲ್ಲಿ ಈ ಘೋಷವಾಕ್ಯ ಔಷಧಿಮಯ ಸಾಲಾಗಿ ಪರಿಣಮಿಸಿದೆ ಎಂದರು.
ಈ ಯೋಗ ಕಾರ್ಯಕ್ರಮಕ್ಕೆ ಆಗಮಿಸಿದ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿಯವರು ಯೋಗ ನಡೆಸಿ ಮಾತನಾಡಿ, ಪ್ರೇಮಭಾವವನ್ನು ಉತ್ತೇಜಿಸಿ ಇಡಿ ಒಂದು ಕುಟುಂಬದ ರೀತಿಯಲ್ಲಿ ಒಗ್ಗೂಡಿಸಬೇಕು ಎನ್ನುವುದು ನಮ್ಮ ಗುರಿಯಾಗಿದ್ದು ಸಮಯಕ್ಕಾಗುವವನೇ ಸ್ನೇಹಿತನೆನ್ನುವ ಗಾದೆಯಲ್ಲಿಯೂ ಇದೆ. ಆರೋಗ್ಯ ಸಂಪತ್ತು ಸೌಹಾರ್ದತೆ ಸೃಜನಶೀಲತೆ ಮತ್ತು ಶಾಂತಿ ನೆಮ್ಮದಿಗಳೊಂದಿಗೆ ಆದರ್ಶ ಸಾಮಾಜಿಕ ಕ್ರಮ ನಿರ್ಮಿಸುವ ಗುರಿ ನಮ್ಮ ಮುಂದಿದೆ ಈ ಯೋಗದಿನದಿಂದ ನಾವೆಲ್ಲರೂ ಒಟ್ಟಾಗಿ ಈ ದೇಶ ಕಟ್ಟೋಣ ಒಂದಾಗಿ ಬಾಳೋಣ ಎಂದರು.
ಈ ಯೋಗ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಸುಹಾಸ್, ಸಹಶಿಕ್ಷಕರಾದ ರೇಣುಕೇಶ್, ಅಂಜಲಿ ಅಶ್ವಿನಿಕುಮಾರ್, ರಾಘವೇಂದ್ರ, ಸೌಮ್ಯ, ನಾಗವೇಣಿ, ಗಿರೀಶ, ಭಾಷ ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ಆಸೀನ ಬಾನು, ಎಸ್ಡಿಎಂಸಿ ಸದಸ್ಯರಾದ ಸತ್ಯನಾರಾಯಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…
ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…
ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…