ಹೊಸನಗರ : ವೀರಶೈವ ಯುವ ಮುಖಂಡ ಪುಣಜೆ ಗ್ರಾಮದ ಚಿಕ್ಕಮಣತಿ ವಾಸಿ ಅಭಿಲಾಶ್ ಗೌಡ ಎಂಬುವವರ ಮೇಲೆ ಬೇಳೂರು ಬೆಂಬಲಿಗರಿಂದ ಹಲ್ಲೆಗೆ ಯತ್ನ ನಡೆಸಿರುವ ಆರೋಪದ ಬಗ್ಗೆ ಹೊಸನಗರ ಪೊಲೀಸ್ ಠಾಣೆಗೆ ದೂರಿನ ಅರ್ಜಿ ಸಲ್ಲಿಸಲಾಗಿದೆ.
ಏನಿದು ಪ್ರಕರಣ ? ದೂರಿನಲ್ಲೇನಿದೆ ?
ನಾನು ಏ.23 ರಂದು ಮದ್ಯರಾತ್ರಿ 12:10 ರ ಸುಮಾರಿಗೆ ನನ್ನ ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ಹೊಸನಗರ ತಾಲ್ಲೂಕು ಪುಣಜೆ ಗ್ರಾಮದ ಸಾಗರ-ಹೊಸನಗರ ರಸ್ತೆಯ ಹೊಸಮನೆ ತಿರುವಿನಲ್ಲಿ ಹೋಗುತ್ತಿದ್ದಾಗ ಮೊದಲೇ ನಿಂತಿದ್ದ ಇನ್ನೋವಾ ಕಾರಿನಿಂದ ಕಾಂಗ್ರೆಸ್ ಪಕ್ಷದ ಮುಖಂಡ ಬೇಳೂರು ಗೋಪಾಲಕೃಷ್ಣರವರ ಆಪ್ತನಾಗಿರುವ ಸಣ್ಣಕ್ಕಿ ಮಂಜು @ ಮಂಜುನಾಥ ಬಿನ್ ದ್ಯಾವನಾಯ್ಕ ಇವರು ಕಾರಿನಿಂದ ಇಳಿದು ರಸ್ತೆಗೆ ಅಡ್ಡಬಂದು ಬೈಕಿನಲ್ಲಿ ಹೋಗುತ್ತಿದ್ದ ನನ್ನನ್ನು ನಿಲ್ಲಿಸಲು ಪ್ರಯತ್ನಿಸಿದ್ದು, ನನಗೆ ಅವಾಚ್ಯ ಶಬ್ದಗಳಿಂದ ಬೋ… ಮಗನೆ ನೀನು ನಮ್ಮ ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣಾ ಪ್ರಚಾರದ ಕೆಲಸವನ್ನು ಮಾಡುತ್ತೀಯಾ, ನೀನು ಲಿಂಗಾಯಿತರಾದರೆ ದೊಡ್ಡ, ಜನಾಂಗ ಎಂದು ಜಾತಿ ಹೆಸರು ಹೇಳಿ, ನನಗೆ ಬೆದರಿಕೆ ಹಾಕಿ, ನನ್ನ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದು. ನಾನು ಬೈಕನ್ನು ನಿಲ್ಲಿಸಿರುವುದಿಲ್ಲ. ಅವರುಗಳು ನನ್ನ ಬೈಕನ್ನು ಸುಮಾರು ದೂರದವರೆಗೂ ಕಾರಿನಲ್ಲಿ ಬೆನ್ನತ್ತಿ ಬಂದಿರುತ್ತಾರೆ. ನಾನು ಬೈಕ್ ನಿಲ್ಲಿಸದೆ ಮನೆಗೆ ಹೋಗಿರುತ್ತೇನೆ. ಅವರ ಕಾರಿನಲ್ಲಿ ಸುಮಾರು 7-8 ಜನರಿದ್ದು, ನನ್ನನ್ನು ಹಿಂಬಾಲಿಸಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಸಿ.ಡಿ. ಇದ್ದು ಇದನ್ನು ಠಾಣೆಗೆ ಹಾಜರುಪಡಿಸಿದ್ದೇನೆ.
ಆದ್ದರಿಂದ ತಾವುಗಳು ಮೇಲ್ಕಂಡ ಆರೋಪಿ ಸಣ್ಣಕ್ಕಿ ಮಂಜು ಇವರನ್ನು ಠಾಣೆಗೆ ಕರೆಸಿ ಸೂಕ್ತ ವಿಚಾರಣೆ ನಡೆಸಿ, ನನಗೆ ಸೂಕ್ತ ರಕ್ಷಣೆಯನ್ನು ಕೊಡಿಸಿಕೊಡಬೇಕು ಎಂದು ಅಭಿಲಾಶ್ ಗೌಡ ಹೊಸನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಅರ್ಜಿಯಲ್ಲಿ ತಿಳಿಸಿದ್ದಾರೆ.
ರಿಪ್ಪನ್ಪೇಟೆ: ಕುಮದ್ವತಿ ನದಿ ತೀರದ ಬಟಾಣಿಜಡ್ಡು ಗ್ರಾಮದ ರೈತ ದಾನಪ್ಪ ಎಂಬುವರ ಭತ್ತದ ಬೆಳೆಗೆ ಎರಡು ಕಾಡಾನೆಗಳು ನುಗ್ಗಿ ಬೇಸಿಗೆ…
ಹೊಸನಗರ: ತಾಲ್ಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ವ್ಯಾಪ್ತಿ ಹಲುಸಾಲೆ - ಮಳವಳ್ಳಿ, ಕಾಪೇರಮನೆ ಗ್ರಾಮದ ಗ್ರಾಮಸ್ಥರು ಸಾಗರ-ಹೊಸನಗರದ ಮಧ್ಯ ಭಾಗದಲ್ಲಿದ್ದು…
ಹೊಸನಗರ: ಶುಕ್ರವಾರ ಬೆಳಿಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ ರೈತ ತಿಮ್ಮಪ್ಪ ಎಂಬ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದ್ದು…
ಶಿವಮೊಗ್ಗ: ರಾಜ್ಯದ ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಆದ್ದರಿಂದ ಕ್ಷೇತ್ರದ ಹಿತ ಕಾಯಲು ಗೀತಕ್ಕಗೆ ಮತ ನೀಡಿ, ಆಶೀರ್ವದಿಸಿ…
ಸೊರಬ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರ ಋಣವನ್ನು…
ಚಿಕ್ಕಮಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 03 ರಂದು…