ಹೊಸನಗರ: ಹೆಸರಿಗೆ ಮಾತ್ರ ಮಲೆನಾಡು ಪ್ರದೇಶವಾಗಿದ್ದು ತಾಲ್ಲೂಕಿಗೆ ಮಳೆ ಬಂದು ಒಂದು ತಿಂಗಳಾಗಿದೆ. ಬಾವಿಯ ನೀರು ತಳ ಮಟ್ಟಕ್ಕೆ ತಲುಪಿದೆ ಹೊಸನಗರ ಪಟ್ಟಣ ಪಂಚಾಯತಿಯವರು ನಲ್ಲಿಯ ನೀರು ಕಡಿಮೆಯಾಗುತ್ತದೆ. ಇನ್ನೂ ಒಂದು ವಾರ ಹೊಸನಗರ ತಾಲ್ಲೂಕಿಗೆ ಮಳೆ ಬಾರದಿದ್ದರೆ ಹಳ್ಳಿಯ ಜನರಿಗೆ ಹಳ್ಳ-ಕೊಳ್ಳಗಳಿಂದ ಅಲ್ಪ-ಸ್ವಲ್ಪ ನೀರು ಸಿಗುತ್ತದೆ ಆದರೆ ಪಟ್ಟಣದ ನಿವಾಸಿಗಳು ನೀರಿನ ಬರ ಎದುರಿಸುವಲ್ಲಿ ಯಾವುದೇ ಅನುಮಾನ ಬೇಡ. ಇಂದಿನಿಂದಲೇ ನಲ್ಲಿಯ ನೀರನ್ನು ಮಿತವಾಗಿ ಬಳಸಿ ಸಂಗ್ರಹಿಸಿದರೆ ಸೂಕ್ತ. ಇಲ್ಲವಾದರೆ ಮಳೆ ಬರುವವರೆಗೆ ನೀರಿನ ಬರ ಎದುರಿಸುವುದು ಗ್ಯಾರಂಟಿ. ಆದಷ್ಟು ಪಟ್ಟಣ ಪಂಚಾಯತಿಯ ಸಾರ್ವಜನಿಕರು ತಮ್ಮ ಸುತ್ತ-ಮುತ್ತಲಿನ ಬಾವಿಗಳನ್ನು ಹುಡುಕಿಕೊಳ್ಳುವುದು ಒಳ್ಳೆಯದು.
ಬತ್ತಿದ ಶರಾವತಿ, ಪಪಂ ಅಧಿಕಾರಿಗಳಿಂದ ಪ್ರತಿದಿನ ಹರಸಾಹಸ :
ಈ ವರ್ಷ ಶರಾವತಿ ಹಿನ್ನೀರು ಬಹಳ ಬೇಗ ಬತ್ತಿದೆ ಇಷ್ಟು ವರ್ಷಗಳು ಮೇ ತಿಂಗಳಲ್ಲಿ ಶರಾವತಿ ನೀರಿಗೆ ಬರವಾಗುತ್ತಿತ್ತು ಆದರೆ ಈ ವರ್ಷ ಏಪ್ರಿಲ್ ತಿಂಗಳಲ್ಲಿಯೇ ನೀರಿಗೆ ಬರ ಎದುರಾಗಿದೆ. ಶರಾವತಿ ಹಿನ್ನೀರನ್ನು ಸಿಗಂದೂರು ಸೇತುವೆ ಕಟ್ಟಲು ಉಪಯೋಗಿಸುತ್ತಿರುವುದರಿಂದಲ್ಲೆ ನಮ್ಮ ತಾಲ್ಲೂಕಿಗೆ ನೀರು ಅಭಾವವಾಗಿದೆ ಎಂದು ಹೇಳಲಾಗುತ್ತಿದೆ. ಸೇತುವೆ ನಿರ್ಮಾಣ ಮಾಡಲು ಶರಾವತಿ ಹಿನ್ನೀರನ ಗೇಟ್ ಓಪನ್ ಮಾಡುತ್ತಿರುವುದರಿಂದಲೇ ಶರಾವತಿ ನೀರು ತಳ ಮಟ್ಟ ತಲುಪಿದೆ ಎಂದು ಹೇಳಲಾಗಿದೆ.
ಅಧಿಕಾರಿಗಳ ಹರ ಸಾಹಸ :
ಸುಮಾರು ಹದಿನೈದು ದಿನಗಳಿಂದ ಶರಾವತಿ ಹಿನ್ನೀರಿಲ್ಲದೇ ಪಟ್ಟಣ ಪಂಚಾಯತಿಯ ಸಾರ್ವಜನಿಕರಿಗೆ ನಲ್ಲಿ ನೀರನ್ನು ಕೊಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವರ್ಗ, ಪಟ್ಟಣ ಪಂಚಾಯತಿ ಪೌರ ನೌಕರ ವರ್ಗ ಹಾಗೂ ಆಡಳಿತ ವರ್ಗ ಹರ ಸಾಹಸ ನಡೆಸುತ್ತಿದ್ದು ಜೆಸಿಬಿ ಯಂತ್ರಗಳ ಮೂಲಕ ಶರಾವತಿಯ ನದಿಯ ಮಧ್ಯ ಭಾಗದಲ್ಲಿ ಹಾಗೂ ಸುತ್ತ-ಮುತ್ತ ಭಾಗದಲ್ಲಿ ನೀರು ಬರುವ ಸ್ಥಳದಲ್ಲಿ ಅಗೆದು ನೀರು ಕೊಡುವ ಕೆಲಸ ನಡೆಯುತ್ತಿದ್ದು ಎಲ್ಲಿಯವರೆಗೆ ಶರಾವತಿ ನದಿಯಲ್ಲಿ ನೀರು ಸಿಗುವವರೆಗೆ ಈ ಕೆಲಸ ನಡೆಸುತ್ತೇವೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ಸಿಬ್ಬಂದಿಗಳು ಹೇಳುತ್ತಿದ್ದು ಹೊಸನಗರ ಪಟ್ಟಣ ಪಂಚಾಯತಿ ಸಾರ್ವಜನಿಕರಿಗೆ ನಲ್ಲಿ ನೀರು ಕೊಡಲು ಹರಸಾಹಸ ಮಾಡುತ್ತಿದ್ದಾರೆ.
ಪಟ್ಟಣದ ಸಾರ್ವಜನಿಕರು ನಲ್ಲಿ ನೀರನ್ನು ನಂಬಿಕೊಳ್ಳದೇ ನೀರಿಗಾಗಿ ತುರ್ತು ವ್ಯವಸ್ಥೆ ಇಂದಿನಿಂದಲೇ ಮಾಡಿಕೊಂಡರೆ ಒಳ್ಳೆಯದು ಇಲ್ಲವಾದರೆ ಮುಂದಿನ ದಿನದಲ್ಲಿ ಕಷ್ಟ ಅನುಭವಿಸುವುದು ನೀವೆ.
ರಿಪ್ಪನ್ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…
ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…
ರಿಪ್ಪನ್ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…
ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…
ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…