Categories: Hosanagara News

ಶಾಂತವೇರಿ ಗೋಪಾಲಗೌಡರವರ ಹೋರಾಟದ ಫಲವಾಗಿ ಭೂ ಸುಧಾರಣೆ ; ಶಿವಾನಂದ ಕುಗ್ವೆ


ಹೊಸನಗರ: ಕಾಗೋಡು ಸತ್ಯಾಗ್ರಹ ನೇತೃತ್ವ ವಹಿಸಿದ ಶಾಂತವೇರಿ ಗೋಪಾಲಗೌಡ ಅವರ ಹೋರಾಟದ ಫಲವಾಗಿ ಉಳುವವನೆ ಹೊಲದೊಡೆಯ ಎಂಬ ಕಾನೂನಿಗೆ ನಾಂದಿ ಹಾಡಲಾಯಿತು. ಭೂ ಸುಧಾರಣೆ ಕಾಯ್ದೆಗೆ ಗೋಪಾಲಗೌಡ ಅವರ ಬಡವರ ಮೇಲಿನ ಕಾಳಜಿಯೇ ಸ್ಫೂರ್ತಿಯಾಯಿತು ಎಂದು ಶಾಂತವೇರಿ ಗೋಪಾಲಗೌಡ ಜನ್ಮಶತಮಾನೋತ್ಸವ ಸಂಚಾಲಕ ಶಿವಾನಂದ ಕುಗ್ವೆ ಹೇಳಿದರು.


ಶಾಂತವೇರಿ ಗೋಪಾಲಗೌಡ ಅವರ ಜನ್ಮಶತಮಾನೋತ್ಸವ ರಥಯಾತ್ರೆಯನ್ನು ಹೊಸನಗರದಲ್ಲಿ ಸ್ವಾಗತಿಸಿ ಅವರು ಮಾತನಾಡಿ, ಶಾಂತವೇರಿ ಗೋಪಾಲಗೌಡರ ಹೋರಾಟ ನೆಲೆಯಿಂದ ಇಲ್ಲಿನ ಸಮಾಜವಾದಿ ನೆಲ ಪಕ್ವವಾಯಿತು. ಅವರು ತನಗೆಂದು ಏನೂ ಯೋಚಿಸಲಿಲ್ಲ. ಬಡವರ ಪರವಾಗಿ ಚಿಂತಿಸಿದರು. ಅವರ ಆಶೋತ್ತರದಿಂದ ಭೂ ರಹಿತರಿಗೆ ಭೂಮಿ ಲಭಿಸಿತು. ಅವರ ಜನ್ಮಶತಮಾನೋತ್ಸವ ಆಚರಿಸುವುದು ಫಲಾನುಭವಿಗಳ ಹಕ್ಕಾಗಿದೆ ಎಂದರು.


ನಿವೃತ ಪ್ರಾಚಾರ‍್ಯ ಡಾ. ಸೊನಲೆ ಶ್ರೀನಿವಾಸ್ ಮಾತನಾಡಿ, ಶಾಂತವೇರಿ ಗೋಪಾಲಗೌಡರು ಹೊಸನಗರದ ಮೊದಲ ಶಾಸಕರು. ಈ ತಾಲ್ಲೂಕು ಸಮಾಜವಾದಿ ನೆಲವಾಗಿತ್ತು. ಅವರು ಗೇಣಿದಾರರ ಸಮಸ್ಯೆ, ರೈತ ವಿರೋಧಿ ನೀತಿಗಳ ಹೋರಾಟಗಳಿಗೆ ಜೀವ ತುಂಬಿದರು. ಶಾಂತವೇರಿ ಗೋಪಾಲಗೌಡ ಅವರ ರೈತ ನಿಲುವಿನ ಪ್ರೇರೇಪಣೆಯಿಂದಾಗಿ ಭೂ ಸುಧಾರಣೆ ಕಾಯ್ದೆ ಜಾರಿಯಾಯಿತು ಎಂದರು.


ಮಂಜುನಾಥ್ ಬ್ಯಾಣದ್, ವಸಂತಕುಮಾರ್, ವಾಸಪ್ಪ ಮಾಸ್ತಿಕಟ್ಟೆ, ತಲನೇರಿ ಶ್ರೀನಿವಾಸ್‌ಗೌಡ, ಬಿಜೆಪಿ ಉಮೇಶ್ ಮತ್ತಿತರರು ಇದ್ದರು.

Malnad Times

Recent Posts

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

12 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

14 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

15 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

20 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

21 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

1 day ago