ರಿಪ್ಪನ್ಪೇಟೆ : ಆರೋಗ್ಯವಂತರಾಗಿ ದೈಹಿಕವಾಗಿ ಸಬಲರಾಗಿರಬೇಕು. ಸತ್ವಯುತ ಆಹಾರ ಸೇವನೆಯು ಶಾರೀರಿಕ ಕ್ರಿಯೆಗಳಿಗೆ ರಕ್ತ ಸಂಚಲನೆ ದೇಹದಲ್ಲಿ ಸಮರ್ಪಕವಾಗಿರಬೇಕು. ಸಹಜವಾಗಿ ಸೇವಿಸುವ ಆಹಾರದಲ್ಲಿ ವಿಟಮಿನ್, ಕಬ್ಬಿಣದ ಅಂಶ ಇರಬೇಕು. ವೈದ್ಯರ ಸಲಹೆಯಂತೆ ಆರೋಗ್ಯವಂತರ ರಕ್ತವನ್ನು ಆಕಸ್ಮಿಕ ಸಂದರ್ಭದಲ್ಲಿ ದಾನ ಮಾಡುವಂತರಾಗಬೇಕು ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹೇಳಿದರು.
ರಿಪ್ಪನ್ಪೇಟೆ ಪೊಲೀಸ್ ಠಾಣೆ, ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ಹುಂಚ ಹಾಗೂ ಮಾಜಿ ಸೈನಿಕರು ಹಾಗೂ ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರದವರೆಲ್ಲರ ಸಹಯೋಗದಲ್ಲಿ ಇಲ್ಲಿಯ ರಂಗರಾವ್ ಸ್ಮಾರಕ ಸಭಾಭವನ (ಶ್ರೀ ಪದ್ಮಾಂಬ ಪ್ರೌಢಶಾಲೆ) ದಲ್ಲಿ ಶನಿವಾರದಂದು ಬೆಳಿಗ್ಗೆ 10.00 ಗಂಟೆಗೆ ದಾಖಲೆಯ ಎರಡನೇ ಬಾರಿಗೆ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಕ್ತದಾನಿಗಳ ಸಂಖ್ಯೆ ವರ್ಧಿಸುವಂತಾಗಲೂ ಪ್ರತಿಯೋರ್ವರೂ ಸದೃಢ ಶಾರೀರಿಕ ಆರೋಗ್ಯ ಕಾಪಾಡಬೇಕು. ರಕ್ತದಾನಿಗಳಾವಂತೆ ಗ್ರಾಮಮಟ್ಟದಲ್ಲಿ ದಾನ ಶಿಬಿರ ಆಯೋಜಿಸಿರುವುದು ಔಚಿತ್ಯಪೂರ್ಣವಾದುದೆಂದರು. ರಕ್ತದಾನಿಗಳನ್ನು, ಸಂಯೋಜಕರನ್ನು ಶ್ರೀಗಳು ಜೀವದಾನದ ಪುಣ್ಯಪ್ರಾಪ್ತಿಯಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಪ್ರವೀಣ ಎಸ್.ಪಿ. ಪೊಲೀಸ್ ಉಪನಿರೀಕ್ಷಕರು, ರಕ್ತದಾನಿ ಹಾಲೇಶ್ ಪೊಲೀಸ್, ಸಿಬ್ಬಂದಿಗಳಾದ ಅಲ್ಫಾಜ್ ಬಿ.ಯು. ಸೋಮಶೇಖರ್, ಉಮೇಶ್, ಮಧುಸೂದನ್ ಕಾರ್ಮಿಕ ಘಟಕ ಹುಂಚ, ಗ್ರಾಮ ಪಂಚಾಯತಿ ಸದಸ್ಯರಾದ ದೇವೇಂದ್ರ, ಪದ್ಮಾಂಬ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜೆ. ಪ್ರಹ್ಲಾದ್ ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು. ಒಟ್ಟು 55 ಜನ ರಕ್ತದಾನ ಮಾಡಿದರು.
ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…
ರಿಪ್ಪನ್ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…
ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…
ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ನಗರದ ಫ್ರೀಡಂ ಪಾರ್ಕ್ನಲ್ಲಿ ಗೀತಾಶಿವರಾಜ್ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…
ರಿಪ್ಪನ್ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…