ರಿಪ್ಪನ್ಪೇಟೆ : ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕೇವಲ ದೇವಸ್ಥಾನ, ಮಂದಿರಗಳಲ್ಲಿ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ಮನೆಯಲ್ಲಿ ದೀಪ ದೀಪಗಳ ಹಣತೆ ಸಾಲು ರಾತ್ರಿ ವೇಳೆ ಕಾರ್ತಿಕ ಮಾಸದಲ್ಲಿ ಬೆಳಕು ಪಸರಿಸುತ್ತದೆ ಎಂದು ಹೊಂಬುಜದ (Hombuja) ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಅತಿಶಯ ಶ್ರೀಕ್ಷೇತ್ರ ಹೊಂಬುಜ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ವಿಶ್ವವಂದ್ಯ ಯಕ್ಷಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯ ಪರಂಪರಾನುಗತ ಲಕ್ಷದೀಪೋತ್ಸವದಂದು ತಿಳಿಸಿದರು.
ಶ್ರೀ ಮಹಾವೀರ ತೀರ್ಥಂಕರರ ನಿರ್ವಾಣದ ಸಂಕೇತವಾಗಿ ದೀಪ ಪ್ರಜ್ವಲನೆಯ ಪದ್ಧತಿ ರಾಷ್ಟ್ರದೆಲ್ಲೆಡೆ ಪ್ರಚಲಿತವಾಯಿತು. ನಿಜ ಅರ್ಥದಲ್ಲಿ ಸುಜ್ಞಾನ ದೀಪಗಳು ಜೀವನವನ್ನು ಬೆಳಗಿಸುವಂತಾಗಲಿ ಎಂಬ ಸದ್ಭಾವನೆ ಮೂಡಲಿ ಎಂದು ಸ್ವಸ್ತಿಶ್ರೀಗಳವರು ಭಕ್ತವಂದದವರಿಗೆ ಆಶೀರ್ವದಿಸಿದರು.
ಪೂರ್ವಾಹ್ನ ‘ಜಿನಸಹಸ್ರನಾಮ’ ಆರಾಧನೆಯಲ್ಲಿ ಭಕ್ತಸಮೂಹ ಪಾಲ್ಗೊಂಡಿದ್ದರು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ವಿಧಾನಗಳು ನೆರವೇರಿದವು.
ಶ್ರೀ ಪದ್ಮಾಂಬ ದಿನದರ್ಶಿಕೆ ಬಿಡುಗಡೆ :
ಹೊಂಬುಜ ಅತಿಶಯ ಶ್ರೀಕ್ಷೇತ್ರದಿಂದ ಪ್ರಕಟಿಸಲ್ಪಡುವ ಶ್ರೀ ಪದ್ಮಾಂಬಾ ದಿನದರ್ಶಿಕೆ-2024 ಸ್ವಸ್ತಿಶ್ರೀಗಳವರು ಬಿಡುಗಡೆಗೊಳಿಸಿ, ಪ್ರತಿಯೊಂದು ದಿನದ ಧಾರ್ಮಿಕ ಮಹತ್ವವನ್ನು ಆಚರಿಸುವುದು ಪ್ರತಿಯೋರ್ವರ ಧರ್ಮ ಮತ್ತು ಕರ್ತವ್ಯ ಎಂದು ಶುಭ ಹಾರೈಸಿದರು. ಊರ-ಪರವೂರ ಭಕ್ತರು ದೀಪೋತ್ಸವವನ್ನು ಕಣ್ತುಂಬಿಕೊಂಡರು.
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…
ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…
ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಭಾರಿ…
ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…
ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…