Categories: Hosanagara News

ಹೊಸನಗರದಲ್ಲಿ ನಡೆದ BSY ಕಾರ್ಯಕ್ರಮದ ವೇಳೆ ಇಬ್ಬರನ್ನು ಪೊಲೀಸರು ವಶ ಪಡೆದಿದ್ದು ಯಾಕೆ ಗೊತ್ತಾ ?


ಹೊಸನಗರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಸಭೆ ವೇಳಿ ಕಪ್ಪುಬಟ್ಟೆ ಪ್ರದರ್ಶನ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದ ಬಿಜೆಪಿ ಕಾರ್ಯಕರ್ತ, ಯುವ ಉದ್ಯಮಿ ಅರೆಮನೆ ವಿನಾಯಕ ಅವರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದರು.


ಬಿಜೆಪಿ ಕಾರ್ಯಕರ್ತ ಅರೆಮನೆ ವಿನಾಯಕ ಅವರು ಶನಿವಾರ ಸಂಜೆ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹರಿಯಬಿಟ್ಟು ನಾಳೆನ ಮಾಜಿ ಮುಖ್ಯಮಂತ್ರಿಗಳ ಕಾರ‍್ಯಕ್ರಮದಲ್ಲಿ ಕಪ್ಪುಬಟ್ಟೆ ಪ್ರದರ್ಶನ ಮಾಡುವುದಾಗಿ ಪ್ರಚುರ ಪಡಿಸಿದ್ದರು. ಇದನ್ನರಿತ ಇಲ್ಲಿನ ಪೊಲೀಸರು ಬೆಳಿಗ್ಗೆ ಅರೆಮನೆ ವಿನಾಯಕ ಅವರ ಮನೆಗೆ ಬಂದು ಠಾಣೆಗೆ ಕರೆ ತಂದಿದ್ದಾರೆ. ಹೇಳಿಕೆ ಕುರಿತಾಗಿ ಸ್ಪಷ್ಟನೆ ನೀಡಿದರೂ ಸುಮ್ಮನಾಗದ ಪೊಲೀಸರು ವಿನಾಯಕ ಅರೆಮನೆ ಅವರನ್ನು ಕಾರ‍್ಯಕ್ರಮ ಮುಗಿಯುವವರೆಗೂ ಠಾಣೆಯಲ್ಲಿರಿಸಿ ಕೊಂಡಿದ್ದಾರೆ.


ಚರ್ಚೆಗೆ ಗ್ರಾಸ:
ಮಾಜಿ ಮುಖ್ಯಮಂತ್ರಿಗಳ ಕಾರ‍್ಯಕ್ರಮದಲ್ಲಿ ತಾಲ್ಲೂಕಿನ ಸಮಸ್ಯೆ ಹೇಳಿಕೊಳ್ಳಲು, ಕಪ್ಪುಬಟ್ಟೆ ಪ್ರದರ್ಶನ ಮೂಲಕ ಮನವಿ ಮಾಡುವುದಾಗಿ ಹೇಳಿಕೊಂಡ ಯುವ ಉದ್ಯಮಿ ವಿನಾಯಕರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಎಷ್ಟು ಸರಿ? ಅಲ್ಲದೆ ಹೇಳಿಕೆ ಬಗ್ಗೆ ಸಮಜಾಯಿಸಿ ನೀಡಿದರೂ ಕಾರ‍್ಯಕ್ರಮ ಮುಗಿಯುವವರೆಗೆ ಅಂದರೆ 4 ಗಂಟೆಗೂ ಹೆಚ್ಚು ಕಾಲ ಅರೆಮನೆ ವಿನಾಯಕ ಅವರನ್ನು ಠಾಣೆಯಲ್ಲಿರಿಸಿಕೊಂಡಿದ್ದ ಪೊಲೀಸರ ಕ್ರಮ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.


ಸಾಮಾಜಿಕ ಹೋರಾಟಗಾರ ಟಿ.ಆರ್ ಕೃಷ್ಣಪ್ಪ ವಶ:
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಭೆಯಲ್ಲಿ ರೈಲ್ವೆ ಸಮಸ್ಯೆ ಕುರಿತಾಗಿ ಮನವಿ ನೀಡಲು ಬಂದ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅವರನ್ನು ಇಲ್ಲಿನ ಪೊಲೀಸರು ವಶ ಪಡಿಸಿಕೊಂಡರು.


ಬೆಳಿಗ್ಗೆ 8ಗಂಟೆ ಸುಮಾರಿಗೆ ಕಾರ‍್ಯಕ್ರಮ ಬಳಿ ಇದ್ದ ಟಿ.ಆರ್. ಕೃಷ್ಣಪ್ಪ ಅವರನ್ನು ವಶಪಡಿಸಿಕೊಂಡ ಪೊಲೀಸರು ಕಾರ‍್ಯಕ್ರಮ ಮುಗಿಯುವವರೆಗೆ ಠಾಣೆಯಲ್ಲಿರಿಸಿಕೊಂಡರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಟಿ.ಆರ್.ಕೃಷ್ಣಪ್ಪ, ಅರಸಾಳು ಗ್ರಾಮದಲ್ಲಿ ರೈಲ್ವೆ ನಿಲುಗಡೆ ಇತ್ತು ಈಗ ರೈಲು ನಿಲುಗಡೆಯನ್ನು ನಿಲ್ಲಿಸಲಾಗಿದೆ. ಇದರಿಂದ ಹೊಸನಗರ ಪ್ರಯಾಣಿಕರು ದೂರದ ಆನಂದಪುರಕ್ಕೆ ಹೋಗಬೇಕಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅರಸಾಳುವಿನಲ್ಲಿ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲು ಬಂದಿದೆ. ಪೊಲೀಸರು ನನ್ನನ್ನು ಒಳಗೆ ಹಾಕಿದ್ದಾರೆ. ಇದು ಪೊಲೀಸರು ಅಮಾನುಷ ಕ್ರಮವಾಗಿದೆ. ಈ ಕುರಿತಾಗಿ ಪೊಲೀಸ್ ಮೇಲಾಧಿಕಾರಿಗಳಲ್ಲಿ ದೂರು ನೀಡಲಾಗುವುದು ಎಂದು ತಿಳಿಸಿದರು.

Malnad Times

Recent Posts

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

8 hours ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

14 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

23 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 day ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

1 day ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

1 day ago