ಹೊಸನಗರ: ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕೊಡಚಾದ್ರಿ ಕಾಲೇಜ್ ಎದುರು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಬಸ್ ಸ್ಟ್ಯಾಂಡ್ ನಿರ್ಮಿಸಲಾಗಿದೆ. ಈ ಬಸ್ ಸ್ಟ್ಯಾಂಡ್ ಸಮೀಪ ಮೆಸ್ಕಾಂ ಇಲಾಖೆಯ ಹೈ ವೋಲ್ಟೇಜ್ ವಿದ್ಯುತ್ ಕಂಬವಿದೆ. ಈ ಕಂಬದ ಪಕ್ಕದಲ್ಲಿಯೇ ದೊಡ್ಡ ಹಸಿ ಆಲದ ಮರವಿದೆ. ಆಲದ ಮರಕ್ಕೆ ವಿದ್ಯುತ್ ತಂತಿಗಳು ತಾಗಿಕೊಂಡಿದೆ. ಹಸಿ ಆಲದ ಮರ ಮುಟ್ಟಿದರೆ ಏನಾಗಬಹುದು ಎಂದು ನೀವೆ ಆಲೋಚಿಸಿ.
ಜನರಿಗೆ ದನಗಳಿಗೆ ಪ್ರಾಣಿ ಪಕ್ಷಿಗಳಿಗೆ ಕರೆಂಟ್ ಪಾಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಒಂದು ಕಥೆಯಾದರೆ ಮೆಸ್ಕಾ ಇಲಾಖೆಯವರು ನಿಲ್ಲಿಸಿರುವ ವಿದ್ಯುತ್ ಕಂಬಕ್ಕೆ ಎಂಟು ವಿವಿಧ ಲೈನ್ಗಳ ತಂತಿ ಜೋಡಿಸಲಾಗಿದೆ. ಆಲದ ಮರದ ಬಳ್ಳಿಗಳು ಸುತ್ತಿಕೊಂಡ ಹಾಗೇ ವಿದ್ಯುತ್ ಕಂಬಕ್ಕೆ ಟಿ.ವಿ ಕೇಬಲ್, ಬಿಎಸ್ಎನ್ಎಲ್ ಕೇಬಲ್ ಸುತ್ತಿ ನೆಲಕ್ಕೆ ಬಿಟ್ಟಿರುವ ದೃಶ್ಯ ಕಣ್ಣಿಗೆ ಕಾಣುತ್ತದೆ. ಈ ದೃಶ್ಯ ಕಂಡವರಿಗೆ ಮೈ ಝುಮ್ ಎನ್ನುತ್ತದೆ ಇಲ್ಲೆ ಸಮೀಪವಿರುವ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕ ವೃಂದ ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳಿಗೆ ದೂರು ಸಲ್ಲಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಇನ್ನಾದರೂ ಮೆಸ್ಕಾಂ ಇಲಾಖೆಯವರು ತಂತಿಯ ಮೇಲೆ ಹೋದ ಮರದ ರಂಬೆಗಳನ್ನು ಕಡಿಯಬೇಕು ಹಾಗೂ ಕಂಬಕ್ಕೆ ನೆಲದವರೆಗೆ ಹಾಕಿರುವ ಕೇಬಲ್ಗಳನ್ನು ತೆಗೆಯದಿದ್ದರೆ ಮುಂದಿನ ದಿನದಲ್ಲಿ ಮಳೆಗಾಲದಲ್ಲಿ ದೊಡ್ಡ ಪ್ರಮಾಣದ ಅನಾಹುತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಕ್ಷಣ ಎಚ್ಚೆತ್ತುಕೊಂಡು ಸರಿಪಡಿಸಲು ಮುಂದಾಗಿ ಭಾರಿ ಅನಾಹುತ ತಪ್ಪಿಸಲಿ.
ರಿಪ್ಪನ್ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ನಿಮಿತ್ತ ಮೇ…
ಹೊಸನಗರ: ತಾಲ್ಲೂಕಿನ ವಾರಂಬಳ್ಳಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು ಈವರೆಗೂ ಬೇಡಿಕೆ ಈಡೇರದೆ ಚುನಾವಣೆ…
ರಿಪ್ಪನ್ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿಂದು ದರಗೆಲೆ ತರಲೆಂದು ಕಾಡಿಗೆ ತೆರಳಿದ್ದ ಕೂಲಿ ಕೆಲಸಗಾರ ತಿಮ್ಮಪ್ಪ…
ರಿಪ್ಪನ್ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ. ತಿಮ್ಮಪ್ಪ ಬಿನ್…
ರಿಪ್ಪನ್ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…
ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…