Categories: Hosanagara News

ಹೊಸನಗರ ಪಪಂಗೆ ಖಾಸಗಿ ಬಸ್ ಸ್ಟ್ಯಾಂಡ್ ಮಳಿಗೆಗಳ ಹರಾಜಿನಿಂದ ಭರ್ಜರಿ ಹಣ ಸಂದಾಯ ; ಬಸ್ ಸ್ಟ್ಯಾಂಡ್ ಆವರಣದಲ್ಲಿ ಅಧಿಕಾರಿಗಳಿಂದ 2 ಗಂಟೆ ಹೈಡ್ರಾಮ !


ಹೊಸನಗರ : ಪಟ್ಟಣದ ಖಾಸಗಿ ಬಸ್ಸ್ ಸ್ಟ್ಯಾಂಡ್ ಮಳಿಗೆಗಳು ಹರಾಜು ಮಾಡಲಾಗಿದ್ದು 14 ಮಳಿಗೆಗಳಲ್ಲಿ 10 ಮಳಿಗೆಗಳು ಬಹಿರಂಗ ಹರಾಜಿನಲ್ಲಿ ಭರ್ಜರಿ ಹಣ ಸಂದಾಯವಾಗಿದೆ.
ಸುಮಾರು 15 ವರ್ಷಗಳ ಹಿಂದೆ ಸುಮಾರು 14 ಮಳಿಗೆಗಳು ಹಾಗೂ ಒಂದು ಬಸ್ಸ್ ಸ್ಟ್ಯಾಂಡ್ ಹೋಟೆಲ್ ಹರಾಜ್ ಆಗಿದ್ದು ಆದರೆ ಅಂದು ಅಲ್ಪ ಮೊತ್ತಕ್ಕೆ ಹರಾಜಾಗಿತ್ತು ಆದರೆ ಈ ಬಾರಿ ಸರ್ಕಾರದ ಟೆಂಡರ್ ಮೊತ್ತವೇ ಹೆಚ್ಚು ಮಾಡಲಾಗಿದ್ದು ಸರ್ಕಾರದ ಮೊತ್ತಕ್ಕಿಂತಲೂ ಹೆಚ್ಚಾಗಿ ಬಹಿರಂಗ ಹರಾಜು ಆಗಿದ್ದು ಬಿಡ್‌ದಾರರು ಹೆಚ್ಚು ಹೆಚ್ಚು ಮೊತ್ತಕ್ಕೆ ಬಹಿರಂಗ ಹರಾಜಿನಲ್ಲಿ ತಮ್ಮ ಮಳಿಗೆಗಳನ್ನು ಪಡೆದಿದ್ದಾರೆ.


1ನೇ ಮಳಿಗೆ ವಿನಾಯಕ 15 ಸಾವಿರಕ್ಕೆ, 2ನೇ ಮಳಿಗೆ ಶಾಂತಮೂರ್ತಿ 16500 ರೂಪಾಯಿಗೆ, 3ನೇ ಮಳಿಗೆ ಸದಾನಂದ 16500ಕ್ಕೆ, 4ನೇ ಮಳಿಗೆ ಕೆ.ಬಿ ಮಂಜುನಾಥ 14500, 5ನೇ ಮಳಿಗೆ 24054 ರೂಪಾಯಿಗಳಿಗೆ ಅನೀಷ್ ದೇವ್, 6ನೇ ಮಳಿಗೆ ಪ್ರದೀಪ್ 17ಸಾವಿರ ರೂಪಾಯಿಗೆ, 7ನೇ ಮಳಿಗೆ ದಯಾನಂದಮೂರ್ತಿ 13554ರೂಪಾಯಿಗೆ, 8ನೇ ಮಳಿಗೆ ದಯಾನಂದರವರು 14054ರೂಪಾಯಿಗಳಿಗೆ 9ನೇ ಮಳಿಗೆ ಬಿ.ಎಂ ಬಸವರಾಜ್ 12500ರೂಪಾಯಿಗಳಿಗೆ 11ನೇ ಮಳಿಗೆ ಸುರೇಶ್ ಬಿ.ಎಸ್ 13554ರೂಪಾಯಿಗಳಿಗೆ 14ನೇ ಮಳಿಗೆ ನಾಗರಾಜ ಎಂಬುವವರು 20ಸಾವಿರ ರೂಪಾಯಿಗೆ ಪಡೆದಿದ್ದು ಮಳಿಗೆ ಸಂಖ್ಯೆ 12, 13ರ ಮಳಿಗೆಗಳಿಗೆ ಯಾರು ಬಿಡ್ ಮಾಡದೇ ಇರುವ ಕಾರಣ ಹಾಗೆಯೇ ಉಳಿದಿದೆ ಕೊನೆಯದಾಗಿ ಬಸ್ಸ್ ಸ್ಟ್ಯಾಂಡ್ ಹೋಟಲ್ ಠೇವಣಿ ಮೊತ್ತ 1366924ವಾಗಿದ್ದು ಸರ್ಕಾರದ ದರ 96,757 ಆಗಿದ್ದು ಬಿಡ್‌ದಾರರಾದ ಚಂದ್ರಶೇಖರ ಮತ್ತು ಸಂತೋಷ್ ಶೇಟ್‌ರವರು 50ಸಾವಿರಕ್ಕೆ ಹರಾಜು ಕರೆದಿದ್ದು ಸರ್ಕಾರದ ಮೊತ್ತಕ್ಕೆ ಬರದೇ ಇರುವುದರಿಂದ ಹಾಗೇಯೇ ಉಳಿದಿದೆ ಈ ಬಾರೀಯ ಬಸ್ಸ್ ಸ್ಟ್ಯಾಂಡ್ ಮಳಿಗೆಗಳ ಹರಾಜಿನಲ್ಲಿ ಪಟ್ಟಣ ಪಂಚಾಯಿತಿಗೆ ಬಾರಿ ಲಾಭ ಗಳಿಸಿದೆ.


ಹೊಸನಗರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ಹಾಗೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸದಸ್ಯರುಗಳು ಯಾವುದೇ ಗೊಂದಲವಾಗದಂತೆ ಬಸ್ ಸ್ಟ್ಯಾಂಡ್ ಮಳಿಗೆಗಳ ಬಹಿರಂಗ ಹರಾಜು ಅಚ್ಚುಕಟ್ಟಾಗಿ ನಡೆಸಿದರು.


ಪಟ್ಟಣ ಪಂಚಾಯಿತಿಯ ಹೈಡ್ರಾಮ: ಮಳಿಗೆ ಮಾಲೀಕರು ಹೈರಾಣು
ಹೊಸನಗರ ಪಟ್ಟಣ ಪಂಚಾಯಿತಿಯ ಮಳಿಗೆಗಳ ಹರಾಜು ಪ್ರಕ್ರಿಯೇ ಮುಗಿಯುತ್ತಿದಂತೆ ಹೈಡ್ರಾಮವೇ ನಡೆಯಿತು.
ಗುರುವಾರ ಟೆಂಡರ್ ಪ್ರಕ್ರಿಯೇ ನಡೆಯಿತು. ಆದರೆ ಹಿಂದೆ ಅಂಗಡಿ ಮಾಲೀಕರಿಗೆ ಅಂಗಡಿ ಖಾಲಿ ಮಾಡುವ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪನವರ ಅಧ್ಯಕ್ಷತೆಯಲ್ಲಿ ಶನಿವಾರ ತುರ್ತು ಸಭೆ ನಡೆಸಲಾಯಿತು‌. ತುರ್ತು ಸಭೆಯಲ್ಲಿ ಕೆಲವು ಸದಸ್ಯರು ಇಂದೇ ಹಿಂದಿನ ಅಂಗಡಿ ಮಾಲೀಕರನ್ನು ತೆರವು ಮಾಡಬೇಕು ಎಂದು ಪಟ್ಟು ಹಿಡಿದಿದ್ದೂ ಇಲ್ಲವಾದರೇ ಕೆಲವರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಪಟ್ಟು ಹಿಡಿದಿದ್ದು ಕೆಲವು ಸದಸ್ಯರು ತಕ್ಷಣ ಬೇಡ ಒಂದು ವಾರ ಗಡುವು ನೀಡಿ ಆಮೇಲೆ ಖಾಲಿ ಮಾಡಿಸಲಿ ಎಂದು ಹೇಳಿದರು.

ಪಟ್ಟಣ ಪಂಚಾಯಿತಿಯ ಸದಸ್ಯರ ಹೊಂದಾಣಿಕೆಯ ಕೊರತೆಯಿಂದ ಅಧಿಕಾರಿಗಳಿಗೆ ಏನೂ ಮಾಡಬೇಕು ಎಂಬುವುದನ್ನೂ ತಿಳಿಯದ ನೌಕರರು ಮುಖ್ಯಾಧಿಕಾರಿ ಬಾಲಚಂದ್ರಪ್ಪನವರ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿಯ ಮಹಿಳಾ ನೌಕರರು ಸೇರಿ ಶನಿವಾರ ಸಂಜೆ 4ಗಂಟೆಗೆ ಎಲ್ಲ ಮಳಿಗೆಗಳನ್ನು ಖಾಲಿ ಮಾಡಿ ಬೀಗ ಹಾಕಲು ಆಗಮಿಸಿದ್ದು ಕೆಲವು ಅಂಗಡಿಗಳ ಸಾಮಾನು ಹೊರಗೆ ಹಾಕಿ ಬೀಗ ಹಾಕುವ ಪ್ರಕ್ರಿಯೆಯು ನಡೆಯಿತು. ಪಾನಿಪೂರಿ ಅಂಗಡಿಯ ಮಾಡಿದ ತಿನಿಸುಗಳ ಜೊತೆಗೆ ಪಾತ್ರೆಗಳನ್ನು ಹೊರ ಹಾಕುವ ಪ್ರಕ್ರಿಯೇ ನಡೆಯಿತು. ಬಿ.ಎಸ್ ಸುರೇಶ್ ಮಾತ್ರ ಯಾವುದೇ ಕಾರಣಕ್ಕೂ ನಾನು ಅಂಗಡಿಗೆ ಬೀಗ ಹಾಕುವುದಿಲ್ಲ ನೀವು ಬೀಗ ಹಾಕುವುದಾದರೇ ನನ್ನನ್ನು ಒಳಗೆ ಹಾಕಿ ಬೀಗ ಹಾಕಿ ಎಂದು ಪಟ್ಟು ಹಿಡಿದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಬೀಗ ಹಾಕುವ ಹೈಡ್ರಾಮಕ್ಕೆ 2ಗಂಟೆ ನಂತರ ತೆರೆಬಿತ್ತು ಎಲ್ಲ ಅಂಗಡಿಯ ಹಳೇಯ ಮಾಲೀಕರಿಗೆ ಮಾರ್ಚ್24 ಶುಕ್ರವಾರದವರೆಗೆ ಅಂಗಡಿ ನಡೆಸಲು ಅವಕಾಶ ನೀಡಲಾಯಿತು.
ಒಟ್ಟಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವರ್ಗ ಮತ್ತು ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಹೊಸನಗರ ಪಟ್ಟಣದ ಜನತೆಗೆ ನಗೆಪಾಟಲಿಗೆ ಗುರಿಯಾದರು.

Malnad Times

Recent Posts

ಕಾದ ಕಾವಲಿಯಂತಾದ ಮಲೆನಾಡು, ಬಿಸಿಲಿನ ಜಳಕ್ಕೆ ಜನ ಸುಸ್ತೋ ಸುಸ್ತು

ಶಿವಮೊಗ್ಗ : ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಇರಲು ಇಚ್ಛಿಸುವವರು ಇದ್ದಾರೆ.…

3 hours ago

ಅಭಿವೃದ್ಧಿ ಮಾಡದೇ ಮತದಾರರಿಗೆ ಮುಖ ತೋರಿಸಲು ಆಗದೇ ಮೋದಿ ಹೆಸರಿನಲ್ಲಿ ಮತ ಕೇಳಲು ನಾಚಿಕೆಯಾಗಬೇಕು ; ಬಿ.ವೈ.ಆರ್. ವಿರುದ್ಧ ಹರಿಹಾಯ್ದ ಬೇಳೂರು

ರಿಪ್ಪನ್‌ಪೇಟೆ: ಕಳೆದ 10 ವರ್ಷಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದಿಂದ ಯಾವುದೇ ಅನುದಾನವನ್ನು ತರದೇ ಅಭಿವೃದ್ದಿಯನ್ನು ಮಾಡದೇ ನಿರ್ಲಕ್ಷ್ಯ ವಹಿಸಿರುವ…

6 hours ago

Arecanut Price | ಏಪ್ರಿಲ್ 29ರ ಶಿವಮೊಗ್ಗ ಮಾರುಕಟ್ಟೆಯ ಅಡಿಕೆ ರೇಟ್

ಶಿವಮೊಗ್ಗ : ಏ. 29 ಸೋಮವಾರ ನಡೆದ ಶಿವಮೊಗ್ಗ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ :ರಾಶಿ…

10 hours ago

ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕೃಷಿ ಹೊಂಡದಲ್ಲಿ ಮುಳುಗಿ ಸಾವು !

ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕೃಷಿ ಹೊಂಡದಲ್ಲಿ ಮುಳುಗಿ ಸಾವು ! ಮೂಡಿಗೆರೆ : ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ…

10 hours ago

ಸಿ.ಟಿ.ರವಿ ವಿರುದ್ಧ ಸುಳ್ಳು ಎಫ್‌ಐಆರ್ | ಸರ್ಕಾರದಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಯತ್ನ, ಖಂಡನೆ

ಚಿಕ್ಕಮಗಳೂರು: ಮಾಜಿ ಸಚಿವ ಡಾ.ಸಿ.ಟಿ.ರವಿ ವಿರುದ್ಧ ಸುಳ್ಳು ಮತ್ತು ಅಸಂಬದ್ಧವಾಗಿ ಎಫ್‌ಐಆರ್ ದಾಖಲಿಸುವ ಮೂಲಕ ವಿರೋಧ ಪಕ್ಷಗಳ ಮಾತನಾಡು ಹಕ್ಕು…

21 hours ago

ಸಂಸದ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಮಾಜಿ ಸಚಿವ ಸಿ.ಟಿ.ರವಿ ಸಂತಾಪ

ಚಿಕ್ಕಮಗಳೂರು: ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (77) ಅವರ ನಿಧನಕ್ಕೆ ಮಾಜಿ ಸಚಿವ ಡಾ.ಸಿ.ಟಿ.ರವಿ ಸೇರಿದಂತೆ ಜಿಲ್ಲಾ ಬಿಜೆಪಿ ಕಂಬನಿ…

21 hours ago