Karnataka Assembly Election | ಹೊಸನಗರ ತಾಲ್ಲೂಕು ಕಛೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ; ತಹಶೀಲ್ದಾರ್

0 44


ಹೊಸನಗರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಚುನಾವಣೆಯ ಸಂಬಂಧ ಅನುಕೂಲಕ್ಕಾಗಿ ಹೊಸನಗರ ತಾಲ್ಲೂಕು ಕಛೇರಿಯ ಮುಂಭಾಗ ಕಂಟ್ರೋಲ್ ರೂಮ್ ತೆರೆಯಲಾಗಿದೆ ಎಂದು ತಹಶೀಲ್ದಾರ್ ಧರ್ಮಂತ ಗಂಗಾರಾಮ ಕೋರೆಯವರು ತಿಳಿಸಿದ್ದಾರೆ.


2023ರ ವಿಧಾನಸಭೆಯ ಚುನಾವಣೆಯು ಮೇ 10ರಂದು ನಡೆಯಲಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ದಿನದ 24ಗಂಟೆಯು ಈ ಕಂಟ್ರೋಲ್ ರೂಮ್ ಕೆಲಸ ನಿರ್ವಹಿಸಲಿದ್ದು ಸಾರ್ವಜನಿಕರು ಚುನಾವಣೆಯ ಸಂಬಂಧ ಯಾವುದೇ ರೀತಿಯ ಮಾಹಿತಿಗಳನ್ನು ಹಾಗೂ ದೂರುಗಳನ್ನು 08185-221235 ಅಥವಾ ಮೊಬೈಲ್ ನಂಬರ್ 9481486849 ನಂಬರಿಗೆ ಸಂಪರ್ಕಿಸಬಹುದಾಗಿದೆ. ಈ ಕಂಟ್ರೋಲ್ ರೂಮ್ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!