ರಿಪ್ಪನ್ಪೇಟೆ: ವಡಾಹೊಸಳ್ಳಿ ಅಂಗನವಾಡಿ ಕಾರ್ಯಕರ್ತೆ ಸುಶೀಲ ಎಂಬುವವರ ಮನೆಯ ಕೋಳಿಗೂಡಿನಲ್ಲಿ ಮೊಟ್ಟೆ ಸವಿಯಲು ಹೋಗಿ ನಾಗರಹಾವೊಂದು ಗೂಡಿನಲ್ಲಿ ಬಂಧಿಯಾದ ಘಟನೆ ನಡೆದಿದೆ.
ಹಾವು ಕಂಡರೆ ಮಾರು ದೂರ ಹೋಗುವ ಕಾಲದಲ್ಲಿ ಕೋಳಿಗೂಡಿನಲ್ಲಿ ಮೊಟ್ಟೆ ತಿಂದು ಗೂಡಿನಲ್ಲಿ ಹೆಡೆ ಬಿಚ್ಚಿ ಆಟವಾಡುತ್ತಿರುವ ನಾಗರಹಾವು ಕಂಡ ಬೆಚ್ಚಿಬಿದ್ದ ಮನೆಯವರು ತಕ್ಷಣ ರಿಪ್ಪನ್ಪೇಟೆಯ ಉರಗತಜ್ಞ ಗಂಗಾಧರ ಎಂಬುವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ಉರಗತಜ್ಞ ಸ್ಥಳಕ್ಕೆ ತೆರಳಿ ಕೋಳಿ ಗೂಡಿನಲ್ಲಿ ಬಂಧಿಯಾಗಿದ್ದ ನಾಗರಹಾವನ್ನು ಹಿಡಿದು ಸಮೀಪದ ಕಾಡಿಗೆ ಬಿಡಲಾಯಿತು.