ಅಕ್ರಮವಾಗಿ ಅಪರೂಪದ ವನ್ಯಜೀವಿ ಮಚ್ಚೆ ಗೂಬೆಗಳ ಮಾರಾಟಕ್ಕೆ ಯತ್ನ ; ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ !

0 29


ರಿಪ್ಪನ್‌ಪೇಟೆ : ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿನಾಯಕ ಮತ್ತು ಸಿಬ್ಬಂದಿಯವರುಗಳಾದ ಗಣೇಶ್, ಗಿರೀಶ್ ವಿಶ್ವನಾಥ ಕೃಷ್ಣ ಮತ್ತು ದಿನೇಶ, ಮಹೇಶ್ ಚೈತ್ರ ರವರುಗಳು ಚುಕ್ಕೆಯುಳ್ಳ ಗೂಬೆಗಳನ್ನು (ವೈಜ್ಞಾನಿಕ ಹೆಸರು- ಅಥೀನ್ ಬ್ಲೆವಿನ್ )
ಶಿವಮೊಗ್ಗ ತಾಲೂಕಿನ ಕಲ್ಲೂಪುರ ಗ್ರಾಮದ ಬಳಿ ಭಾನುವಾರ ಸಂಜೆ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 2 ಗೂಬೆಗಳನ್ನು ರಕ್ಷಣೆ ಮಾಡಿದ್ದಾರೆ.

1972ರ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ನ್ಯಾಯಲಕ್ಕೆ ಹಾಜರಿಪಡಿಸಿದಾಗ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

Leave A Reply

Your email address will not be published.

error: Content is protected !!