ರಿಪ್ಪನ್ಪೇಟೆ : ನುಗ್ಗೆಕಾಯಿ ವಿಚಾರಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆಯೊಂದು ಕೆಂಚನಾಲ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ ?
ಫೆ. 20 ರಂದು ಮಧ್ಯಾಹ್ನ ಸುಮಾರು 02 ಗಂಟೆಗೆ ರಾಮ್ ಕುಮಾರ್ ಕಟ್ಟೆ ಎಂಬುವವರು ಕೆಲಸದ ನಿಮಿತ್ತ ರಿಪ್ಪನ್ಪೇಟೆಗೆ ಬಂದಿದ್ದು ಕೆಲಸ ಮುಗಿಸಿ ವಾಪಸ್ ಸಂಜೆ 6-00 ಗಂಟೆ ಸುಮಾರಿಗೆ ಮನೆಗೆ ಹೋದಾಗ ಇದೇ ಗ್ರಾಮದ ನಾಗೇಶ ಬಿನ್ ಚೌಡಣ್ಣ ಇವರು ರಾಮ್ ಕುಮಾರ್ ಮನೆಯ ಹಿತ್ತಲಿನಲ್ಲಿರುವ ನುಗ್ಗೆ ಮರದಿಂದ ನುಗ್ಗೆಕಾಯಿ ಕೊಯ್ದುಕೊಂಡು ಹೋಗುತ್ತಿದ್ದುದ್ದನ್ನು ಗಮನಿಸಿ, ರಾಮ್ ಕುಮಾರ್ ಆತನ ಮನೆ ಎದುರಿನ ರಸ್ತೆಯಲ್ಲಿ ನಿಂತುಕೊಂಡು ‘ಯಾಕೆ ನಮ್ಮ ಮನೆಯ ಹಿತ್ತಲಿನಲ್ಲಿರುವ ನುಗ್ಗೆಕಾಯಿಯನ್ನು ಹೇಳದೇ ಕೇಳದೇ ಕೊಯ್ದುಕೊಂಡು ಹೋಗುತ್ತಿದ್ದೀಯ ?’ ಅಂತಾ ಕೇಳಿದ್ದಕ್ಕೆ ‘ಅದು ನಿನ್ನ ಅಪ್ಪಂದಾ ಮರ ? ನಾನು ಕೊಯ್ದುಕೊಂಡು ಹೋಗುತ್ತೇನೆ ಏನು ಮಾಡುತ್ತಿಯಾ ? ಸೂ… ಮಗನೆ ಅಂತಾ ಅವಾಚ್ಯವಾಗಿ
ಬೈದು ರಾಮ್ ಕುಮಾರ್ ರವರನ್ನು ಆತನ ಮನೆಯ ಎದುರಿನ ರಸ್ತೆಯಲ್ಲಿ ದೂಡಿ ಕೆಡವಿದ್ದು ಕಾಲಿನಿಂದ ಒದ್ದು ಅಲ್ಲೆ ಪಕ್ಕದಲ್ಲಿದ್ದ ಆತನ ಮನೆಯ ಉಣುಗೋಲಿನ ಗೂಟವನ್ನು ಕಿತ್ತುಕೊಂಡು ರಾಮ್ ಕುಮಾರ್ ತಲೆಗೆ ಹೊಡೆದಿದ್ದು ತಪ್ಪಿಸಿಕೊಂಡಿದ್ದರಿಂದ ರಾಮ್ ಕುಮಾರ್ ಬಲಗೈ ನ ಮೊಣಕೈಗೆ ಒಳಪೆಟ್ಟಾಗಿದೆ.
ನಾಗೇಶನ ಜೊತೆಯಲ್ಲಿದ್ದ ಆತನ ತಮ್ಮ ರವಿ ಬಿನ್ ಚೌಡಣ್ಣ, ಈತನು ರಾಮ್ ಕುಮಾರ್ ರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ರಾಜು ಬಿನ್ ಚೌಡಣ್ಣ, ಈತನು ರಾಮ್ ಕುಮಾರ್ ಕುತ್ತಿಗೆಗೆ ಕೈಯಿಂದ ಮುಷ್ಟಿ ಮಾಡಿ ಗುದ್ದಿ ಒಳಪೆಟ್ಟು ಮಾಡಿರುತ್ತಾನೆ. ಅಷ್ಟರಲ್ಲಿ ರವಿ ಈತನು ಕೊರಳು ಪಟ್ಟಿಯನ್ನು ಹಿಡಿದು ಮುಖಕ್ಕೆ ಎದೆಗೆ ಕೈಯಿಂದ ಗುದ್ದಿದ್ದಾನೆ.
ರಾಮ್ ಕುಮಾರ್ ನೋವಿನಿಂದ ಬೊಬ್ಬೆ ಹಾಕಿದ್ದನ್ನು ಕೇಳಿ
ಮುನ್ನ ಮತ್ತು ರಾಘು ಬಿನ್ ಚಂದ್ರಪ್ಪ ಹಾಗೂ ದೇವೇಂದ್ರ ಬಿನ್ ಕೆಂಚಣ್ಣ ರವರು ಗಲಾಟೆಯನ್ನು ಬಿಡಿಸಿದ್ದಾರೆ. ಅಷ್ಟರಲ್ಲಿ
ಆರೋಪಿಗಳು ಇವತ್ತು ಉಳಿದುಕೊಂಡಿದಿಯ ಇನ್ನೊಮ್ಮೆ ಸಿಗು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿ ಅವರ ಮನೆಗೆ ಹೋಗಿರುತ್ತಾರೆ.
ನುಗ್ಗೆಕಾಯಿ ತೆಗೆದುಕೊಂಡ ವಿಚಾರಕ್ಕೆ ಏಕಾಏಕಿ ನನ್ನನ್ನು ಅವಾಚ್ಯವಾಗಿ ಬೈದು, ದೂಡಿ, ಕೆಡವಿ, ಕೈಯಿಂದ ಗುದ್ದಿ,
ದೊಣ್ಣೆಯಿಂದ ಹಲ್ಲೆ ಮಾಡಿ ಒಳಪೆಟ್ಟು ಮಾಡಿದ ನಾಗೇಶ, ರಾಜು ಮತ್ತು ರವಿ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಮ್ ಕುಮಾರ್ ರಿಪ್ಪನ್ಪೇಟೆ ಠಾಣೆಯಲ್ಲಿ
ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರಿಪ್ಪನ್ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ. ತಿಮ್ಮಪ್ಪ ಬಿನ್…
ರಿಪ್ಪನ್ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…
ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…
ರಿಪ್ಪನ್ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…
ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…