ರಿಪ್ಪನ್ಪೇಟೆ: ಹೊಸನಗರ ತಾಲ್ಲೂಕು ಹೆಚ್ಚು ಮಳೆ ಸುರಿಯುವ ಪ್ರದೇಶವೆಂದು ಹಾಗೂ ಮಳೆ ಮಾಪನದಲ್ಲಿನ ಅಂಕಿ ಸಂಖ್ಯೆಯನ್ನಾದರಿಸಿ ಸರ್ಕಾರ ಹೊಸನಗರ ತಾಲ್ಲೂಕಿನ ರೈತರಿಗೆ ಅವೈಜ್ಞಾನಿಕ ವರದಿಯಿಂದ ಮಲೆನಾಡಿನ ನಡುಮನೆ ರೈತರು ವಂಚಿತರಾಗುವಂತಾಗಿ ಇತ್ತ ಬೆಳೆಯೂ ಇಲ್ಲದೇ ಅತ್ತ ವಿಮಾ ಪರಿಹಾರವೂ ಇಲ್ಲದೆ ಪರಿತಪ್ಪಿಸುವಂತಾಗಿದೆ ಎಂದು ಹಿರಿಯ ಸಹಕಾರಿ ಧುರೀಣ ಎಸ್.ಜಿ.ರಂಗನಾಥ್ ರೈತರ ಬಗ್ಗೆ ಕೇಳೋರಿಲ್ಲದಂತಾಗಿರುವ ಬಗ್ಗೆ ಖೇದ ವ್ಯಕ್ತಪಡಿಸಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಹಕಾರಿ ಸಚಿವರಿಗೆ ಪತ್ರ ಬರೆದಿರುವುದಾಗಿ ಮಾಧ್ಯಮದವರಿಗೆ ವಿವರಿಸಿದರು.
ಮಲೆನಾಡಿನ ನಡುಮನೆ ಕೋಡೂರು, ಹೊಸನಗರ, ನಗರ, ಮಾಸ್ತಿಕಟ್ಟೆ, ಚಕ್ರಾನಗರ, ನಿಟ್ಟೂರು, ಮತ್ತಿಮನೆ, ಸಂಪೆಕಟ್ಟೆ ಆ ಕಡೆಯಲ್ಲಿ ಮಳೆ ಪ್ರಮಾಣವನ್ನು ಗಮನಿಸಿ ಹೊಸನಗರದ ಮಳೆ ಮಾಪಕದ ವರದಿಯನ್ನಾದರಿಸಿ ಅತಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ ಎಂಬ ಅಧಿಕಾರಿಗಳ ವರದಿಯನ್ನಾದರಿಸಿ ಸರ್ಕಾರ ಹೊಸನಗರ ತಾಲ್ಲೂಕಿನ ರೈತರಿಗೆ ವಂಚಿಸುವಂತಾಗಿದೆ. ಆದರೆ ಇಲ್ಲಿನ ವಸ್ತು ಸ್ಥಿತಿಯೇ ಬೇರೆಯಾಗಿದೆ ಇದನ್ನು ಅರಿಯದೇ ಅಧಿಕಾರಿಗಳ ವರದಿಯನ್ನ ಗಮನದಲ್ಲಿಟ್ಟುಕೊಂಡ ಸರ್ಕಾರ ರಿಪ್ಪನ್ಪೇಟೆ, ಹುಂಚ ಹೋಬಳಿಯ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಅರಸಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಹುಂಚ, ಕೆಂಚನಾಲ, ಕೋಡೂರು, ಬಾಳೂರು, ಹರತಾಳು, ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೂಡಾ ತಾಲ್ಲೂಕಿನ ಮಳೆಯ ಮಾಪನ ವರದಿಯಿಂದ ನಾವುಗಳು ವಂಚಿರತಾಗುವಂತಾಗಿದೆ. ಈ ಬಗ್ಗೆ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿ ಅವರುಗಳು ಸಮೀಕ್ಷಾ ವರದಿಯನ್ನಾದರಿಸಿ ಈ ಎರಡು ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ವಿಮೆ ಮಾಡಿಸುವ ಮೂಲಕ ಅನಾವೃಷ್ಠಿಯ ಬೆಳೆ ಪರಿಹಾರ ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ರಾಜ್ಯಪಾಲರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…
ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…
ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…