Categories: Ripponpete

ರಿಪ್ಪನ್‌ಪೇಟೆಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ


ರಿಪ್ಪನ್‌ಪೇಟೆ: ಮಾಯೆಯ ಭವಸಾಗರದಿಂದ ಶಿಷ್ಯನನ್ನು ಮತ್ತು ಭಕ್ತನನ್ನು ಸುಲಭವಾಗಿ ದಾಟಿಸುವವರು ಅವರಿಂದ ಅವಶ್ಯಕವಾದ ಸಾಧನೆ ಮಾಡಿಸಿಕೊಳ್ಳುವವರು ಮತ್ತು ಕಠಿಣ ಸಮಯದಲ್ಲಿ ಅವರಿಗೆ ನಿರಪೇಕ್ಷ ಪ್ರೀತಿಯಿಂದ ಆಧಾರ ನೀಡಿ ಸಂಕಷ್ಟದಿಂದ ಪಾರು ಮಾಡುವವರು ಗುರುಗಳೇ ಆಗಿರುತ್ತಾರೆ. ಅಂತಹ ಪರಮಪೂಜನೀಯ ಗುರುಗಳ ಕುರಿತು ಕೃತಜ್ಞತೆ ವ್ಯಕ್ತಪಡಿಸುವ ದಿನ ಅಂದರೆ ಗುರು ಪೂರ್ಣಿಮೆಯಾಗಿದೆ ಎಂದು ಶಿವಮೊಗ್ಗ ವಿಭಾಗ ವ್ಯವಸ್ಥಾಪಕ ಪ್ರಮುಖ್ ಭೌದ್ದಿಕ್ ಲೋಹಿತಾಶ್ವ ಕೇದಿಗ್ಗೆರೆ ಹೇಳಿದರು.


ರಿಪ್ಪನ್‌ಪೇಟೆಯ ಬಿ.ಎಸ್.ಎನ್.ಎಲ್.ಕಛೇರಿ ಪಕ್ಕದ ಶ್ರೀರಾಮ ಮಂದಿರ ಸಭಾಭವನದಲ್ಲಿ ವಿನಾಯಕಪೇಟೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದರು ಆಯೋಜಿಸಲಾದ “ಗುರುಪೂಜಾ ಉತ್ಸವ’’ಕಾರ್ಯಕ್ರಮದಲ್ಲಿ ಬೌದ್ದಿಕ್ ನೆರವೇರಿಸಿ ಕೃತಜ್ಞತೆಯ ಅರಿವಿನಿಂದ ನನ್ನಲ್ಲಿರುವ ಕರ್ತೃತ್ವ ನಕಾರಾತ್ಮಕ ವಿಚಾರಗಳು ಭಾವನೆಗಳೂಂದಿಗೆ ರಾಷ್ಟ್ರ ಭಕ್ತಿ ಹಿಂದು ಧ್ವಜಕ್ಕೆ ಸಲ್ಲಿಸುವ ಸಮರ್ಪಣಾ ಭಾವನೆ ನಮ್ಮನ್ನು ಬಲಿಷ್ಟಗೊಳಿಸುವ ಕೃತಜ್ಞತಾಭಾವ ಎಂದರು.


ಗುರುಪೂಜಾ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸುಧೀಂದ್ರ ಹೆಬ್ಬಾರ್ ವಹಿಸಿ ಮಾತನಾಡಿ, ಆರ್.ಎನ್.ಎಸ್.ನಲ್ಲಿ ಶಿಸ್ತು ಸಹನೆ ಬೆಳೆಸುವ ಮೂಲಕ ಮನುಷ್ಯರಲ್ಲಿ ಶಾಂತಿ ಸಹನೆ ರಾಷ್ಟ್ರಾಭಿಮಾನ ಧರ್ಮಭಿಮಾನ ಆಧ್ಯಾತ್ಮದ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.


ಈ ಸಂದರ್ಭದಲ್ಲಿ ವಿನಾಯಕ ನಗರದ ಆರ್.ಎಸ್.ಎಸ್.ಸಂಘದವರು ಹಾಗೂ ಇನ್ನಿತರ ಅಭಮಾನಿಬಳಗ ಪಾಲ್ಗೊಂಡಿದ್ದರು.

ನಿಧನ ವಾರ್ತೆ :

ರಿಪ್ಪನ್‌ಪೇಟೆ: ಇಲ್ಲಿನ ಮದೀನಾ ಕಾಲೋನಿ ನಿವಾಸಿ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕ ಅಬ್ದುಲ್‌ಖಾದರ್ ಹೃದಯಾಘಾತದಿಂದ ಭಾನುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರ, ಪುತ್ರಿಯರು ಇದ್ದಾರೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

3 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

3 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

3 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

3 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

3 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

3 days ago