ಶಾಸಕ ಬೇಳೂರು ರಿಪ್ಪನ್‌ಪೇಟೆ ನಾಡಕಛೇರಿ ದಿಢೀರ್ ಭೇಟಿ ; ಸಿಬ್ಬಂದಿಗಳಿಗೆ ಖಡಕ್ ವಾರ್ನಿಂಗ್

0 45

ರಿಪ್ಪನ್‌ಪೇಟೆ: ಕೆರೆಹಳ್ಳಿ ಹೋಬಳಿ ಕಛೇರಿಗೆ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ ನೀಡಿ ಕಛೇರಿಯ ಸಿಬ್ಬಂದಿಗಳನ್ನು ಖಡಕ್ ವಾರ್ನಿಂಗ್ ನೀಡಿದರು.

ಸಮಯಕ್ಕೆ ಸರಿಯಾಗಿ ಕಛೇರಿಗೆ ಅಧಿಕಾರಿಗಳು ಬರುತ್ತಿಲ್ಲ ಮತ್ತು ಗ್ರಾಮಸಹಾಯಕ ಪ್ರವೀಣ್ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ ಎಲ್ಲಿದ್ದಾನೆ ? ಎಂದು ಪ್ರಶ್ನಿಸಿದಾಗ ಉಪತಹಶೀಲ್ದಾರ್ ಊಟಕ್ಕೆ ಹೋಗಿದ್ದಾನೆ ಬಂದಿಲ್ಲ ಎಂಬ ಉತ್ತರ ನಿಮ್ಮ ಊಟದ ಸಮಯ ಎಷ್ಟು ಈಗ ಎಷ್ಟು ಸಮಯ ಎಂದಾಗ ಗ್ರಾಮ ಲೆಕ್ಕಾಧಿಕಾರಿ ಹೊಸನಗರಕ್ಕೆ ಮುಟೇಷನ್ ದಾಖಲೆ ತರಲು ಕಳುಹಿಸಿದೆ ಎಂದು ಹೇಳಿ ಸಮಜಾಯಿಸಿ ನೀಡಿದರು.

ಕಾರ್ಯಕರ್ತ ಶೇಷಪ್ಪ ಶಾಸಕರ ಬಳಿ ಬೆಳಗ್ಗೆಯಿಂದ ಗ್ರಾಮ ಸಹಾಯಕ ಎಂಬುವರು ಬೆಳಗ್ಗೆಯಿಂದಲೂ ಕಛೇರಿಗೆ ಬಂದಿಲ್ಲ ಎಂದು ಹೇಳಿದಾಗ ಯಾರು ಯಾಕೆ ಬಂದಿಲ್ಲ ಎಂದು ಕೇಳಿ ಈ ರೀತಿಯಲ್ಲಿ ಸಾರ್ವಜನಿಕರ ದೂರುಗಳು ಬಂದರೆ ತಮ್ಮ ವಿರುದ್ದ ಕ್ರಮ ಜರುಗಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ಅಲ್ಲದೆ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಹೋಬಳಿ ಕಛೇರಿ ನಡೆಸಲಾಗುತ್ತಿದ್ದು ಕಟ್ಟಡ ಶಿಥಿಲವಾಗಿದೆ ಎಂದು ಪತ್ರಕರ್ತರು ಗಮನ ಸೆಳೆಯುವುದರೊಂದಿಗೆ ಈ ಶಿಥಿಲ ಕಟ್ಟಡವನ್ನು ತೆರವುಗೊಳಿಸಿ ಇಲ್ಲಿಯೇ ಹೊಸ ಕಟ್ಟಡ ನಿರ್ಮಿಸಿ ಹೋಬಳಿ ಕಛೇರಿಯನ್ನು ಇಲ್ಲಿ ಮಾಡಿದರೆ ದೂರದ ಊರುಗಳಿಂದ ಬಂದು ಹೋಗುವವರಿಗೆ ತುಂಬಾ ಅನುಕೂಲವಾಗುತ್ತದೆಂದು ಹೇಳಿದಾಗ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೋಬಳಿ ಕಛೇರಿಗೆ ಬರುವ ರೈತಾಪಿ ವರ್ಗಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಹೇಳಿ ಸಾರ್ವಜನಿಕರಿಂದ ದೂರುಗಳು ಬಂದರೇ ಸುಮ್ಮನಿರಲು ಸಾಧ್ಯವಿಲ್ಲ ಎಂದು ಉಪತಹಶೀಲ್ದಾರ್ ಹುಚ್ಚರಾಯಪ್ಪಗೆ ವಾರ್ನಿಂಗ್ ಮಾಡಿದರು.

ಈ ಸಂದರ್ಭದಲ್ಲಿ ಅರಸಾಳು ಗ್ರಾ.ಪಂ.ಮಾಜಿ ಅಧ್ಯಕ್ಷ ಉಮಾಕರ್, ಡಿ.ಈ.ಮಧುಸೂದನ್, ಹೆಚ್.ಎನ್.ಉಮೇಶ್, ಶ್ರೀಧರ, ರಾಜುಗೌಡ, ಡಾಕಪ್ಪ ಚಂದಾಳದಿಂಬ ಶಿವಪ್ಪ ವಡಾಹೊಸಳ್ಳಿ, ಆಸೀಫ್ ಭಾಷಾಸಾಬ್, ಗಣಪತಿ ಗವಟೂರು, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾದ ರೇಣುಕಯ್ಯ, ಇನ್ನಿತರು ಹಾಜರಿದ್ದರು.

ಮುಂಜಾನೆ ದಿಢೀರ್ ಸುರಿದ ಭಾರಿ ಮಳೆ :

ರಿಪ್ಪನ್‌ಪೇಟೆ : ಹವಾಮಾನ ಇಲಾಖೆಯ ಮಾಹಿತಿಯಂತೆ ಇಂದು ಮುಂಜಾನೆ ದಿಢೀರ್ ಗುಡುಗು ಸಹಿತ ಭಾರಿ ಮಳೆ ಸುರಿಯಿತು.
ಸುಮಾರು 6.30 ಗಂಟೆಗೆ ಪ್ರಾರಂಭವಾದ ಮಳೆ ಒಂದೂವರೆ ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಸುರಿದು ಇಳೆ ತಂಪಾಯಿತು.
ರಿಪ್ಪನ್‌ಪೇಟೆಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಉಂಟಾಗಿದೆ.

Leave A Reply

Your email address will not be published.

error: Content is protected !!