ರಿಪ್ಪನ್ಪೇಟೆ: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಜಗದ್ಗುರುಗಳ ಶ್ರಾವಣ ಮಾಸದ ಇಷ್ಟಲಿಂಗ ಶಿವಪೂಜಾನುಷ್ಟಾನ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಲೆನಾಡಿನ ಜಂಬಳ್ಳಿ, ಹುಗುಡಿ, ಕೊಳವಳ್ಳಿ, ಕಗ್ಗಲಿ, ಬೆಳಂದೂರು, ಬಣ್ಣಶೆಟ್ಟಿಕೊಪ್ಪ, ಶಂಕರಹಳ್ಳಿ, ದುಮ್ಮ, ಬ್ರಹ್ಮೇಶ್ವರ ಭಕ್ತರು ಪೂಜೆಯನ್ನು ಪಾಲ್ಗೊಂಡರು.
ಶ್ರಾವಣ ಮಾಸದಲ್ಲಿ ಶಿವನಾಮಸ್ಮರಣೆಯಿಂದಾಗಿ ಭಕ್ತರ ಇಷ್ಟಾರ್ಥಗಳು ನೆರವೇರುವುದರೊಂದಿಗೆ ಮಳೆ ಬೆಳೆ ಸಂವೃದ್ದಿಯಾಗಿ ಶಾಂತಿ ಸಂವೃದ್ದಿ ಕರುಣಿಸುವಂತಾಗಲೆಂದು ಶ್ರೀ ಜಗದ್ಗರುಗಳು ಭಕ್ತ ಸಮೂಹಕ್ಕೆ ಹರಸಿದರು.
ಈ ಸಂದರ್ಭದಲ್ಲಿ ಜಂಬಳ್ಳಿ ಜೆ.ಎಂ.ಶಾಂತಕುಮಾರ್, ಹುಗುಡಿ ಎಂ.ವಿ.ರಾಜು, ಕಗ್ಗಲಿಯ ಗಿರೀಶ್ಪಾಟೀಲ್, ಕೊಳವಳ್ಳಿ ರಮೇಶಗೌಡ ಕೆ.ಬಿ, ಪತ್ರಕರ್ತ ಕೆ.ಎಂ.ಬಸವರಾಜ್ ರಿಪ್ಪನ್ಪೇಟೆ, ಹೊಸನಗರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಮ್ಮಾ ರೇವಣಪ್ಪಗೌಡ, ವಿನೋಧ ರೇವಣಪ್ಪಗೌಡ, ಅಖಿಲಭಾರತ ವೀರಶೈವ ಮಹಾಸಭಾದ ತಾಲ್ಲೂಕು ಮಾಜಿ ಅಧ್ಯಕ್ಷ ಕೆ.ಎಂ.ಚನ್ನಬಸಪ್ಪಗೌಡ, ಶಿರಾಳಕೊಪ್ಪ ವೀರೇಶಗೌಡ, ಚಿದಾನಂದ ಬೆಳಂದೂರು, ಸದಾನಂದ ಕಾರ್ಗಲ್, ಶಂಕರಹಳ್ಳಿ ಗಂಗಾಧರ, ಇನ್ನಿತರರು ಜಗದ್ಗುರುಗಳ ಇಷ್ಟಲಿಂಗ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು.
ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…
ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…
ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…